...

5 views

ಮತದಾನ ನಮ್ಮ ಹಕ್ಕು
ರಕ್ತದಾನ ಮಾಡಿದರೆ ಒಬ್ಬರಿಗೆ ಒಳ್ಳೆಯದಾಗುತ್ತದೆ.
ನೇತ್ರದಾನ ಮಾಡಿದರೆ ಇಬ್ಬರಿಗೆ ಒಳ್ಳೆಯದಾಗುತ್ತದೆ.
ಅನ್ನದಾನ ಮಾಡಿದರೆ ನೂರಾರು ಜನಕ್ಕೆ ಒಳ್ಳೆಯದಾಗುತ್ತದೆ
ವಿಧ್ಯಾದಾನ ಮಾಡಿದರೆ ಸಹಸ್ರಾರು ಜನಕ್ಕೆ ಒಳ್ಳೆಯದಾಗುತ್ತದೆ.
ಅದೇ ಇಡೀ ದೇಶಕ್ಕೆ ಒಳ್ಳೆಯದು ಆಗಬೇಕಂದರೆ ಮತದಾನ ಮಾಡಬೇಕು.

ಒಬ್ಬ ನಿಸ್ವಾರ್ಥ, ನಿಷ್ಕಳಂಕ, ಪ್ರಾಮಾಣಿಕ ವ್ಯಕ್ತಿಗೆ ಮತದಾನ ಮಾಡೋದ್ರಿಂದ ಎಲ್ಲರಿಗೂ ಎಲ್ಲ ರೀತಿಯಿಂದ ಒಳ್ಳೆಯದಾಗಲಿ.
ಇಡೀ ವಿಜಯಪುರ ಜಿಲ್ಲೆಯ ಹಳ್ಳಕೊಳ್ಳ ತುಂಬಿ ರೈತರು ಬಾಳು ಹಸನಾಗಲಿ, ಶಿಕ್ಷಣದ ಅಭಿವೃದ್ಧಿ ಆಗಲಿ, ಬಡತನದ ಬೇಗೆಯಿಂದ ನೊಂದ ಮನಸ್ಸಿಗೆ ಸೂರು ಸಿಗಲಿ, ಯಾವುದೇ ಭ್ರಷ್ಟಾಚಾರ ಇಲ್ಲದೆ ಅಭಿವೃದ್ಧಿಯ ಪಥದಲ್ಲಿ ಸಾಗಲಿ, ನಾರಿಯರಿಗೆ ಸುರಕ್ಷತೆ ಸಿಗಲಿ. ಮೂಲಭೂತ ಹಕ್ಕುಗಳಾದ ಸಾರಿಗೆ, ಕುಡಿಯುವ ನೀರು, ಶಿಕ್ಷಣ ಎಲ್ಲರಿಗೂ ಸಿಗುವಂತಾಗಲಿ ಮಾದರಿ ವಿಜಯಪುರ ಜಿಲ್ಲೆಯಾಗಲಿ ಎಂದು ಮಾತ ಚಲಾಯಿಸಿದ್ದೇನೆ.

ವಸುದೈವ ಕುಟುಂಬಕಂ


ನಾನು ನನ್ನ ಕರ್ತವ್ಯ ಹಾಗೂ ಮತವನ್ನು ಚಲಾಯಿಸಿದ್ದೇನೆ. ಮತ್ತೆ ನೀವು ?

-ರಾಜೇಂದ್ರ ಈಳಗೇರ