...

2 views

ನನ್ನ ಕೊಠಡಿ
ಮನೆಯ ತುಂಬೆಲ್ಲ
ಹರಡಿರುವ ವಸ್ತುಗಳ
ರಾಶಿಯಲಿ ಪುಸ್ತಕವು
ಮನವ ಸೆಳೆದಿದೆ॥
ಮನವ ಕಾಡಿದೆ
ಬೇಕು ಬೇಕೆಂಬ
ಹಂಬಲವ ಮೂಡಿಸಿದೆ॥
ಕಂಡದ್ದು ಕೊಳ್ಳುವ
ಮನದ ಬಯಕೆಗೆ
ಮಕ್ಕಳಿಗಿರಲಿ ಎಂಬ
ವ್ಯಾಮೋಹಕೆ
ಜ್ಞಾನದ ತವನಿಧಿ
ಎಂಬ ಕಾರಣಕೆ
ಕೊಳ್ಳುತ್ತಲೇ ಹೋದೆ॥
ಇನ್ನಿಲ್ಲದ ಹುಚ್ಚು
ಆವರಿಸಿ ಕಣ್ಣ
ಕಟ್ಟಿ ಬಿಟ್ಟಿದೆ॥
ನನ್ನ ಸಮಯವ
ಅರಿತ ಸಂಗಾತಿ
ನನ್ನೊಡನೆ ಜೊತೆಗೂಡಿ
ನೆಮ್ಮದಿಯ ನೀಡಿದೆ॥
ಮನದ ಮೂಲೆಯಲಿ
ಅವಿತಿರುವ ದುಃಖಕ್ಕೆ
ತಂಪನೆರೆಯುವ
ಸಂಜೀವಿನಿಯಾಯಿತು॥

Related Stories