![...](https://api.writco.in/assets/images/writingSuggestion/3132212110334111072.webp)
9 views
ಅವಮಾನ
ಕೆಲಸ ಯಾವುದೆ ಇರಲಿ
ಕಾಡುವುದು ಅವ್ಯಕ್ತ ಭಯ
ತಿಳಿದಿರಲಿ ತಿಳಿಯದಿರಲಿ
ಹಿಂಜರಿಕೆ ಹಿಂಡುವುದು ಬಿಡದೆ॥
ಜೀವನದ ಸಾಗರದಿ
ಬದುಕ ನಾವೆಯ ನಡೆಸೆ
ಬಿಡದೆ ಪ್ರಯತ್ನವು
ಸಾಗಲೇಬೇಕು॥
ಬಹುಮಾನ ಬಯಸಿಲ್ಲ
ಅನುಮಾನ ಬೇಕಿಲ್ಲ
ಅವಮಾನದ ಹೊರೆಯ
ನೀ ಹೊರಿಸಬೇಡ॥
ಜೀವನದ ಮಜಲಿನಲಿ
ಅವಮಾನದೇಟುಗಳು
ಮರಳಿ ಬರದಂತೆ
ಕೂಪಕ್ಕೆ ತಳ್ಳಿದವು॥
ಪ್ರಯತ್ನದ ಹಾದಿಯಲಿ
ದಾರಿ ಕಾಣದ ಹಾಗೆ
ಅವಮಾನದ ಹೊರೆ
ಮುಚ್ಚಿ ಬಿಟ್ಟಿತು॥
ಬುದ್ದಿಯದು ಮಂಕಾಗಿ
ಧೈರ್ಯವದು ಕುಗ್ಗಿ
ಬದುಕಿನ ಉತ್ಸಾಹ
ಮುರುಟಿಹೋಯಿತು॥
ಕಾಡುವುದು ಅವ್ಯಕ್ತ ಭಯ
ತಿಳಿದಿರಲಿ ತಿಳಿಯದಿರಲಿ
ಹಿಂಜರಿಕೆ ಹಿಂಡುವುದು ಬಿಡದೆ॥
ಜೀವನದ ಸಾಗರದಿ
ಬದುಕ ನಾವೆಯ ನಡೆಸೆ
ಬಿಡದೆ ಪ್ರಯತ್ನವು
ಸಾಗಲೇಬೇಕು॥
ಬಹುಮಾನ ಬಯಸಿಲ್ಲ
ಅನುಮಾನ ಬೇಕಿಲ್ಲ
ಅವಮಾನದ ಹೊರೆಯ
ನೀ ಹೊರಿಸಬೇಡ॥
ಜೀವನದ ಮಜಲಿನಲಿ
ಅವಮಾನದೇಟುಗಳು
ಮರಳಿ ಬರದಂತೆ
ಕೂಪಕ್ಕೆ ತಳ್ಳಿದವು॥
ಪ್ರಯತ್ನದ ಹಾದಿಯಲಿ
ದಾರಿ ಕಾಣದ ಹಾಗೆ
ಅವಮಾನದ ಹೊರೆ
ಮುಚ್ಚಿ ಬಿಟ್ಟಿತು॥
ಬುದ್ದಿಯದು ಮಂಕಾಗಿ
ಧೈರ್ಯವದು ಕುಗ್ಗಿ
ಬದುಕಿನ ಉತ್ಸಾಹ
ಮುರುಟಿಹೋಯಿತು॥
Related Stories
11 Likes
0
Comments
11 Likes
0
Comments