...

7 views

ವಾದ ವಿವಾದ
ವಾದದಲ್ಲಿ ಬರೀ ಗೆಲ್ಲುವುದಲ್ಲ
ಹದವಿರುವ‌ ಮಾತು ಹೃದಯದ
ಕದ ತೆರೆದು ಬೆಲ್ಲವ ಸವರುವಂತಿರಬೇಕು
ಮುದ ನೀಡಿ ಮಕರಂದದ ಸಿಹಿ ಹೊದ್ದಿರಬೇಕು.


ಎಲ್ಲ ಗೊತ್ತಿರಲು
ನಾನಲ್ಲ ನೋಡು ಪಂಡಿತ
ಬಲ್ಲವನಂತೆ ನುಡಿಯಲು
ಮನದೊಳಗೆ ಲಗ್ಗೆಯಿಡಬೇಕಿದೆ ತುಡಿತ..

ಸ್ವಾದವಿಲ್ಲದ ವಾದವೊಂದು
ಕಲಹಕ್ಕೆ ಕರ್ತೃವಾಗಿ
ನಾದವಿಲ್ಲದ ಸ್ವರವಾಗಿ
ಸಭೆಯೆಲ್ಲ ಬುಸುಗುಡುತ್ತಿತ್ತು..

ಮಾತಿನೊಳಗೆ ತೂಕಡಿಕೆಯಿರದೆ
ತೂಕ ತೂಗುತಿರಬೇಕು
ತಲೆದೂಗಬೇಕು,ಕುಂತವನೊಳಗೆ
ವಿಷಯವೊಂದು ನೆಲೆಯೂರಬೇಕು..

*ರಮೇಶ್ ಹಡಪದ*