...

4 views

ಅನುಮಾನದ ಹುತ್ತ ಒಂದ ಸುತ್ತ
ಇದರೊಳಡಗಿದೆ ನಂಜು
ಕುಂತರು ನಿಂತರು ಹೃದಯದ
ಕಣ್ಣಿಗೆ ಆವರಿಸಿದ ಮಂಜು
ಎಲ್ಲ ನೂಕಿ ಮನಕಾದರೂ ಅಂಜು..

ಕಾಣದೆಲ್ಲದರೊಳಗೊಂದು ಗುಮಾನಿ
ಇರಲಾರದೊಂದು ಇರುವೆ ಇಟ್ಟುಕೊಂಡಂತೆ
ಅನುಮಾನವೆಂಬುದು ಅಡವಿಟ್ಟಕೊಂಡತೆ
ನಿದಿರೆಯ ಭಂಗಕ್ಕೆ ಸಂಗಾತಿಯಂತೆ..

ಹುಳಿಯಾದ ಸಂಸಾರಕೆ
ಗುಳಿಗೆ ಬೇಕಾಗಿದೆ.
ಹಳಿಗೆ ಬರಬೇಕಿದೆ ಬದುಕು,
ಕಳಚಿದ ಪೊರೆಯೆಸೆಯಲು..

ಗುಳಿಗೆಯಿಲ್ಲದ ರೋಗಕೆ
ತಾಳ್ಮೆಯೊಂದು ತಳವೂರಿ
ಎಳೆಯ ಬೇಕಿದೆ ಬಂಡಿ
ಉಳುಮೆ ಮಾಡಲು ನಗುವ ಬಿತ್ತಲು..

ವಿಷ ಜಂತುವಿನಂತೆ
ಇದರಮಲು ನಿನ್ನೊಳಗೆ
ಬಾ ನೀ ಅದಬಿಟ್ಟು
ಸುಖ ಹೊದ್ದ ಜಗದೊಳಗೆ..

ಕಣ್ಣು ಮುಚ್ಚಿಸಿದ ಸಂಶಯ
ಮಣ್ಣು ಮುಕ್ಕಿಸಿತು ನಿನ್ನಾಸೆಯ
ಹೆಣ್ಣು ಹೊನ್ನು‌ ಮಣ್ಣಿನ ಮೂಸೆಯಲ್ಲಿ
ಬೆನ್ನು ಬಿದ್ದು ಒದ್ದಾಡುತಿದೆ ಈ ಸಂಶಯ..

ಪರರ ನಂಬಲಾರ
ನಾನೇ ನೊಡಿದ್ದೆನಲ್ಲ ಎನ್ನುವ
ಕಾಮಾಲೆ ಕಣ್ಣಿಗೆ
ಅವನೇ ಸರದಾರ...


*ರಮೇಶ್ ಹಡಪದ*