...

6 views

ಬದುಕು ಶಾಂತಿ ವನ
ಕದನ

ತುಂಡು ಜಾಗಕ್ಕೆ
ತುಂಡು ತುಂಡಾಗಿ
ಉಂಡೆಯಾದ ಜೀವಗಳೆಷ್ಟೋ
ಉಂಡು ಆಡುವ ಹರೆಯದಲಿ
ಗುಂಡು ಹಾಕಿ,ಗುಂಡಿಕ್ಕಿಸಿಕೊಂಡ
ಮೌಂಸದ ಮುದ್ದೆಗಳೆಷ್ಟೋ..

ಶಾಂತಿ

ಕದನದಲಿ ಗಳಿಸಿ ,ಕಳೆದುಕೊಂಡಿದ್ದೇ ಹೆಚ್ಚು
ಕಹಳೆ ಊದುವೂದೇಯಾದರೇ
ಹಳೆ ಗಾಯ ಮಾಸಿ, ಮರೆಸುವ
ಶಾಂತಿ ಕ್ರಾಂತಿಯ ಕಹಳೆಯೂದಿ
ಇತಿಹಾಸದ ಪುಟ ಪುಟದಲ್ಲಿ
ಉಳಿದೆಲ್ಲವೂ ಹಿಡಿದಿವೆ ಬರೀ ಪತನದ ಹಾದಿ.

ಜೈಕಾರ

ಹತ್ತಕ್ಕೆ ಅಲ್ಲಿ ಜೈಕಾರ
ಇನ್ನ ಹತ್ತಕ್ಕೇ ಇತ್ತ ಜೈಕಾರ
ಅತ್ತ ,ಇತ್ತ ,ಎರಡು ಬದಿ ಸರಿದು
ಹುತ್ತದೊಳಗಿನ ಸರ್ಪದಂತೆ
ಗೆದ್ದವನ ಹಿಂದೆ ಇವರದು ಬಣ್ಣ ಬಣ್ಣದಾಕಾರ..


*ರಮೇಶ್ ಹಡಪದ*