...

7 views

ವೈದ್ಯೋ ನಾರಾಯಣೋ ಹರಿಃ


ತೊಟ್ಟಿಲಿನ ಹಸುಗೂಸು
ತಾಯ ಅಮೃತಕ್ಕಾಗಿ ಕನವರಿಸಿ
ಕಾತರಿಸಿ ಕಾಯುತಿಹುದು ॥

ಆದರಾತಾಯಿ ಸಾಯುತಿಹ
ಜೀವಿಗಳಿಗೆ ಆರೈಕೆ
ಅಮೃತವ ನೀಡುತಿಹಳು ॥

ಮುಸ್ಸಂಜೆ ಹೊತ್ತಿನಲ್ಲಿ
ಪತಿಯ ನೆನಪಲ್ಲಿ ಮಡದಿ
ಹನಿಗಣ್ಣಾಗುತಿಹಳು ॥

ಆದರಾ ಪತಿಯಲ್ಲಿ
ಶ್ರೀಪತಿಯಾಗಿ ದುಃಖಿತರ
ಕಣ್ಣೀರ ಒರೆಸುತಿಹನು ॥

ತುಪ್ಪದ ದೀಪವಾ ಬೆಳಗಿ
ಮಗಳ ಕ್ಷೇಮಕ್ಕೆ ತಾಯಿ
ಬೇಡು ತಿಹಳು ॥

ಆದರಾ ಮಗಳಲ್ಲಿ ಜನರ
ಮನೆ ಮಗಳಾಗಿ ರೋಗಿಗಳ
ಶುಶ್ರೂಷೆ  ಮಾಡುತಿಹಳು ॥

ಎಂದು ಬರುವನು ಮನೆಗೆ
ನನಕಂದ ಎನ್ನುತ್ತಾ ಬಾಗಿಲಲಿ 
ತಂದೆ ಕಾಯುತಿಹನು ॥

ಆದರಾ ಕಂದನಲ್ಲಿ ಹಗಲಿರುಳು
ಬಿಡುವಿರದೆ ಅಸಹಾಯಕರ ಸೇವೆ
ಮಾಡುತಿಹನು

ನಗುಮೊಗದಿ ಧೃಡ ಚಿತ್ತದಿಂ
ಸೇವೆಗೈಯ್ಯುತಿಹ ನಿಮಗಿದೋ
ನಮ್ಮ ಸಾಷ್ಟಾಂಗ ನಮನ ॥
© Sagarika