...

10 views

ಮನುಜ
ಗಾಳಿಯಾಗಬಾರದಿತ್ತೇ ನಾ
ಎಲ್ಲಾರಿಗೂ ಉಸಿರಾಡಲು..!!

ಮರವಾಗಬಾರದಿತ್ತೇ ನಾ
ನೆರಳು ಕೊಡಲು...!!

ಆಹಾರವಾಗಬಾರದಿತ್ತೇ ನಾ
ಹಸಿವು ನೀಗಿಸಲು..!!

ನೀರಾಗಬಾರದಿತ್ತೇ ನಾ
ಬಾಯಾರಿದವರ ದಣಿವರಿಸಲು..!!

ಕಲ್ಲಾಗಬಾರದಿತ್ತೇ ನಾ
ಕಷ್ಟಗಳ‌ ಸಹಿಸಲು..!!

ಮನುಜನಾಗಿರುವೆ ನಾ
ಏನಾದರು ಸಾಧಿಸಲು..!!

✍️ಕಾವ್ಯ ಸಾಮಾನಿ
ಮಲಾರಬೀಡು