...

1 views

ದೀಪಾವಳಿಯ ನಂತರ ಜನರು ಶಾಂತಿಯ ಉಸಿರನ್ನು ತೆಗೆದುಕೊಳ್ಳಲು ಇಲ್ಲಿಗೆ ಹೋಗುತ್ತಿದ್ದಾರೆ….
ನೀವು ದೀಪಾವಳಿ ಹಬ್ಬವನ್ನು ಶಾಂತವಾದ ಸ್ಥಳಗಳಲ್ಲಿ ಕಳೆಯಲು ಬಯಸಿದರೆ ಬಹುಶಃ ಲೇಖನವು ಅದ್ಭುತವಾದ ತಾಣಗಳ ಬಗ್ಗೆ ಮಾಹಿತಿ ನೀಡುತ್ತದೆ.

ಹಚ್ಚ ಹಸಿರಿನಿಂದ ಕೂಡಿದ ವಾತಾವರಣ, ಮನಮೋಹಕ ಕಣಿವೆಗಳು ಮತ್ತು ಎತ್ತರವಾದ ಪರ್ವತಗಳ ನೋಟಗಳು ಒತ್ತಡದಿಂದ ಸ್ವಲ್ಪ ಬ್ರೇಕ್‌ ದೊರಕಿಸಿಕೊಡುತ್ತದೆ. ಹಾಗಾದರೆ ಯಾವೆಲ್ಲಾ ತಾಣಗಳಿಗೆ ದೀಪಾವಳಿ ಹಬ್ಬದ ರಜೆಗೆ ಹೋಗಲು ಪ್ಲಾನ್ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
ದೀಪಾವಳಿಯ ರಜೆಗೆ ಸ್ನೇಹಿತರೊಟ್ಟಿಗೆ ಅಥವಾ ಏಕಾಂಗಿಯಾಗಿ ದಾಂಡೇಲಿಗೆ ಹೋಗಲು ಪ್ಲಾನ್ ಮಾಡಿ. ಇದನ್ನು ದಕ್ಷಿಣ ಭಾರತದ ಸಾಹಸ ರಾಜಧಾನಿ ಎಂದೇ ಕರೆಯುತ್ತಾರೆ.
ದಾಂಡೇಲಿ ಶಾಂತಿ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದೆ. ಇದು ಹಸಿರು ಭೂದೃಶ್ಯಗಳು, ರಿವರ್‌ ರಾಫ್ಟಿಂಗ್‌ನಂತಹ ರೋಮಾಂಚಕ ಸಾಹಸಗಳು ಎಂತವರಿಗೂ ಇಷ್ಟವಾಗುತ್ತದೆ. ಉಳವಿ ದೇವಸ್ಥಾನ, ಕಾವ್ಲಾದ ಪುರಾತನ ಗುಹೆಗಳು ಇಲ್ಲಿ ನೋಡಬೇಕಾಗಿರುವ ತಾಣವಾಗಿದೆ. ವೈಟ್‌ವಾಟರ್ ರಾಫ್ಟಿಂಗ್, ಬೋಟ್ ರೈಡ್ ಮತ್ತು ಕಯಾಕಿಂಗ್‌ನಲ್ಲಿ ತೊಡಗಿಸಿಕೊಳ್ಳಿ.
ಕರ್ನಾಟಕದ ಗೋಕರ್ಣ ನೆಮ್ಮದಿ ಬಯಸುವವರಿಗೆ ಸ್ವರ್ಗವಾಗಿದೆ. ಪುರಾತನ ದೇವಾಲಯಗಳಿಂದ ಹಿಡಿದು ಅಪೂರ್ವವಾದ ಕಡಲತೀರದ ವರೆಗೆ ಸ್ಥಳಗಳಿವೆ. ಪಟ್ಟಣದ ಹಳ್ಳಿಗಾಡಿನ ನೋಟವು ಬಹಳಷ್ಟು ಪ್ರಯಾಣಿಕರು ಮತ್ತು ವಿದೇಶಿಯರ ಗಮನವನ್ನು ಸೆಳೆದಿದೆ.
ಹಲವಾರು ಕಡಲತೀರಗಳು, ಯಾತ್ರಾ ಸ್ಥಳಗಳು ಮತ್ತು ಜಲಪಾತಗಳು ಜನರನ್ನು ಸುಲಭವಾಗಿ ಆಕರ್ಷಿಸುತ್ತದೆ. ಓಂ ಬೀಚ್, ಪ್ಯಾರಡೈಸ್ ಬೀಚ್ ಎಲ್ಲರ ಅಚ್ಚುಮೆಚ್ಚಾಗಿದೆ.
ಕೇರಳ ರಾಜ್ಯದ ವಯನಾಡ್‌ಗೆ ನೀವು ಹೋಗಲು ಯೋಜಿಸಿ. ಇದೊಂದು ಸುಂದರವಾದ ಗಿರಿಧಾಮವಾಗಿದ್ದು, ತಂಪಾದ ಸ್ಥಳದಲ್ಲಿ ಕೆಲವು ದಿನಗಳು ಉಳಿದು ಬರಲು ವಯನಾಡ್ ಬೆಸ್ಟ್ ಆಗಿದೆ.
ಅಸ್ಪೃಶ್ಯ ಕಾಡುಗಳು, ಮಂಜು ಪರ್ವತಗಳು ಮತ್ತು ಉದ್ದನೆಯ ಹರಡಿರುವ ತೋಟಗಳ ದೃಶ್ಯಾವಳಿಗಳು ನಿಮಗೆ ಬೆರಗುಗೊಳಿಸಬಹುದು. ವಯನಾಡ್‌ ವರ್ಷಪೂರ್ತಿ ಹಿತವಾದ ಹವಾಮಾನವನ್ನು ಹೊಂದಿರುತ್ತದೆ. ಇಲ್ಲಿ ಟ್ರೆಕ್ಕಿಂಗ್, ಹೈಕಿಂಗ್, ಪರ್ವತಾರೋಹಣ, ರಾಕ್ ಕ್ಲೈಂಬಿಂಗ್, ರಾಪ್ಪೆಲಿಂಗ್, ಕ್ಯಾಂಪಿಂಗ್ ನಂತಹ ಥ್ರಿಲ್ಲಿಂಗ್ ಚಟುವಟಿಕೆಗಳನ್ನು ಅಂತ್ಯವಿಲ್ಲದೇ ಆನಂದಿಸಬಹುದು.
ತಮಿಳುನಾಡಿನ ಕೊಯಮತ್ತೂರು ದಕ್ಷಿಣದ ಜನರನ್ನು ಮಾತ್ರವಲ್ಲದೇ ಉತ್ತರ ಭಾರತದ ಮಂದಿಗೂ ಆಕರ್ಷಿಸುತ್ತದೆ. ಈ ಸ್ಥಳವನ್ನು ಅನೇಕರು ಕೋವೈ ಎಂದೂ ಕರೆಯುತ್ತಾರೆ .ಹಸಿರು ಬೆಟ್ಟಗಳು, ವಿಶಾಲವಾದ ಘಾಟ್‌ಗಳು ಮತ್ತು ಸುಂದರವಾದ ಜಲಪಾತಗಳು ಕೊಯಮತ್ತೂರಿನ ಆಕರ್ಷಣೆಯಾಗಿದೆ.
ಇದು ಪ್ರವಾಸಿಗರಿಗೆ ಸ್ವರ್ಗೀಯ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಹಸಗಳು, ದೇವಾಲಯಗಳಿಗೆ ಸಂದರ್ಶಿಸುವಂತಹ ಅನೇಕ ಕಾರ್ಯಗಳನ್ನು ಮಾಡಬಹುದು.