...

4 views

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಒಂದು ಊರಲ್ಲಿ ಅಪ್ಪ ರಾಮಣ್ಣ, ಅವರ ಹೆಂಡ್ತಿ ಶಾಂತಾ ಇದ್ದರೂ ಅವರಿಗೇ ಇಬ್ಬರು ಮಕ್ಕಳಿದರು ಅಣ್ಣ ಮಹೇಶ್ ಮತ್ತು ತಂಗಿ ಪಾರ್ವತಿ. ಅವರು ಬಡವರು ಅವರ ಅಮ್ಮ ನೆರೆದವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು ಮತ್ತು ಅವರ ಅಪ್ಪಾ ಒಂದು ಸಣ್ಣ ಕಾರ್ಖಾನೆ ನಲ್ಲಿ ಕೆಲಸ ಮಾಡುತಿದ್ದರು. ಅವರ ಮಗಳು ಓದಿನಲ್ಲಿ ಆಸಕ್ತಿ ಇದ್ದರೂ ಅವರ ಅಪ್ಪಾ ಅಮ್ಮ ಅವಳ ಓದನ್ನು ಅರ್ಧಕ್ಕೆ ನಿಲ್ಲಿಸಿ ಮದ್ವೆ ಮಾಡಿ ಕೊಡುತ್ತಾರೆ. ಆದರೆ ಎಸೆಸೆಲ್ಸಿ ಫೇಲ್ ಆದ ಮಗನನ್ನು ಓದು ಅಂತ ಓದಿಸಿ ಪೊಲೀಸ್ ಆಗಿ ಮಾಡಿಸುತ್ತಾರೆ.. ಅವರ ಮಗಳ ಮನೆಯಲ್ಲಿ ಗಂಡ ಕುಡಿದು ಹೊಡಿದು ಕಾಡುತ್ತಿದ್ದ.. ಒಂದು ಸರಿ ಅಣ್ಣನ ಮದ್ವೆ ತಂಗಿ ಮತ್ತು ಅವಳ ಗಂಡ ಬಂದಾಗ ತಂಗಿ ಅವರ ಸಂಬಂಧಿಕರ ಜೊತೆ ಮಾತಾಡುವುದನ್ನು ಕಂಡ ಗಂಡ ಕೋಪಾಗೊಂಡ್ ಮತ್ತು ಅವಳನ್ನ ಹೊಡೆದಿದ್ದ... ಅದನ್ನು ಮರುದಿನ ಕಂಡ ಎಲ್ಲಾ ಮನೆವ್ರು ಅವಳ ಗಂಡನನ್ನು ಹೊಡೆದು ಕಳಿಸಿದರು ಆವಾಗ ಅವರ ಅಪ್ಪಾ ಒಂದು ಮಗಳೆ ನೀನು ನಮ್ ಜೊತೆನೇ ಇರು ಎಂದು ಹೇಳಿದ.. ಸ್ವಲ್ಪ ದಿನಗಳು ಹಾಗೆ ಕಳೆದವು... ಅವಳ ಗಂಡ ಕರೆ ಮಾಡಿ ನನ್ನ ಕಡೆಯಿಂದ ತಪ್ಪಾಯಿತು ನಾ ಇನ್ನೂ ಹೀಗೆ ಮಾಡಲ್ಲ ನನ್ನ ಹೆಂಡ್ತಿ ಮತ್ತು ನನ್ನ ಮಕ್ಕಳನ್ನು ಕಳ್ಸಿ ಕೊಡಿ ಎಂದು ಅವರ ಮಾವನಾದ ರಾಮಣ್ಣ ನ ಬಳಿ ಹೇಳುತ್ತಾನೆ..ಆವಾಗ ಅವರು ಅವರ ಮಗಳನ್ನಾ ಗಂಡನ ಮನೆಗೆ ಕಳ್ಸಿ ಕೊಡುತ್ತಾರೆ ಆದರೆ ಯಾವುದೇ ರೀತಿಯ ಕಿರಿ ಕಿರಿ ತಪ್ಪುದಿಲ್ಲಾ.. ಇದರಿಂದ ಬೇಸತ್ತ ಪಾರ್ವತಿ ಮತ್ತೆ ಅವಳ ತವರು ಮನೆಗೆ ಹೋಗಲು ಪ್ರಯತ್ನ ಮಾಡುತ್ತಾಳೆ ಆದರೆ ಈ ಭಾರಿ ಅವರ ತವರು ಮನೇವೃ ಇದಕ್ಕೆ ಒಪ್ಪುವುದಿಲ್ಲ.. ಏಕೆಂದರೆ ಅವರು ಈಗ ಶ್ರೀಮಂತರಾಗಿ ಅವರ ಮಗ ಮತ್ತು ಅವರ ಮೊಮ್ಮಕಲೊಂದ್ದಿಗೆ ಹಾಯಾಗಿ ಇರುತ್ತಾರೆ . ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನೋಹಗೆ ಅವಳು ಅವಳ ಮಕ್ಕಳನ್ನು ಓದಿಸ ಬೇಕು ಎಂದು ಸಹಾಯ ಕೆಲೋದೀಕೆ ಹೋದರೆ ನಮ್ಮಗು ಮಕ್ಕಳು ಖರ್ಚು ತುಂಬಾ ಇದೆ ಎಂದು ಹೇಳುತ್ತಾರೆ.. ಇದನ್ನು ಎಲ್ಲ ನೋಡಿದ ಗಂಡ ರಮೇಶ್ ಅವಳಿಗೆ ಕಿರಿ ಕಿರಿ ಕೊಡುವುದನ್ನು ಕ್ರಮೇಣ ಕಡಿಮೆ ಮಾಡುತ್ತಾನೆ ಏಕೆಂದರೆ ಅವಳಿಗೆ ಅವರು ಆಗ್ಲಿಲ್ಲ ನಾನು ಆದ್ರೂ ಸರಿಯಾಗಿ ನೋಡ್ಕೋ ಬೇಕು ಅಂತ ಜ್ಜ್ಞಾನ ಆಗುತ್ತೆ ಆದರೆ ಶ್ರೀಮಂತ ಅಹಂ ನಲ್ಲಿ ಇರೋ ಅವರ ತವರು ಮನೆವ್ರಿಗೆ ಇದು ಅರ್ಥ ಆಗ್ಲಿಲ್ಲ .. ಇದರಿಂದ ತಿಳಿದೂ ಬರುವುದು ಇಸ್ಟೆ ಪ್ರಕೃತಿ ತಕ್ಕ ಹಾಗೆ ಯಾರು ಬೇಕಾದ್ರೂ ಬದಲಾಗ ಬಹುದು ಕ್ರೂರಿ ಗಂಡ ಬದಲು ಆದ, ಆಕಡೆ ಒಳ್ಳೆವ್ರು ಅಂತಾ ಅನಿಸಿಕೊಂಡ ತಂದೆ ತಾಯಿ ಮಗ ಅಷ್ಟೇ ನಮಗೆ ಅನ್ನ ಹಾಕೋದು ಅಂತ ಹೆಣ್ಣು ಮಕಳ್ಳನ್ ಬೇಗ ಅರ್ಧಕ್ಕೆ ಓದು ನಿಲ್ಸಿ ಮದ್ವೆ ಹೆಂಗದ್ರು ಇರ್ಲಿ ಹಿಂದೂ ಮುಂದೂ ನೋಡದೆ ಬೇರೇವರ್ ಜೊತೆ ಮದ್ವೆ ಮಾಡಿ ಕೊಟ್ಟು ಭಾರ್ ಕಡಿಮೆ ಮಾಡ್ಕೊಂಡ ಬಿಡ್ತಾರೆ.🥺