...

2 views

ಆತ್ಮ ಗೌರವ ಶ್ರೇಷ್ಠ ಗೌರವ ಗೆಳೆಯರೇ
*ಆತ್ಮ ಗೌರವ ಶ್ರೇಷ್ಠ ಗೌರವ ಗೆಳೆಯರೇ*

ನಿಮ್ಮನ್ನು ನಿರ್ಲಕ್ಷಿಸುವವರು ಎಂಥ ಮಹಾನ್ ವ್ಯಕ್ತಿಗಳಾಗಿದ್ದರು ಅವರಿಂದ ದೂರವಿರಿ....
ನಿಮಗೆ ಬೆಲೆ ಕೊಡುವವರು ಸಾಮಾನ್ಯ ವ್ಯಕ್ತಿಗಳಾಗಿದ್ದರು ಪರವಾಗಿಲ್ಲ ಅವರನ್ನು ಗೌರವಿಸಿ...
ನೋವು ಪಾತಾಳವಿದ್ದಂತೆ ನಲಿವು ಪರ್ವತವಿದ್ದಂತೆ ನಲಿವು ಅನ್ನೋ ಗರಿ ಏರೋಕೆ ಶ್ರಮ ಪಡ್ಬೇಕು ..... ಆದ್ರೆ,ನೋವಿನ ತಳ ಸೇರೋಕೆ ಕಾಲು ಜಾರಿದ್ರೆ ಸಾಕು..!

ನಿಮ್ಮ ವಿಶ್ವಾಸಿಗರಲ್ಲಿ ಮಾತ್ರವೇ ನಿಮ್ಮ ಮನದ ನೋವನ್ನು ಬಿಚ್ಚಿಡಿ.
ವಿಶ್ವಾಸಕ್ಕೆ ಅರ್ಹರಲ್ಲದ ವ್ಯಕ್ತಿಗಳ ಜೊತೆ ನೀವು ಮನದ ನೋವು ಹೇಳಿಕೊಂಡರೆ ನಿಮ್ಮ ನೋವಿನ ಅಸಹಾಯಕತೆಯನ್ನೆ ಬಂಡವಾಳ ಮಾಡಿಕೂಳ್ತಾರೆ

ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕವೇ ಸರಿ ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ
ಸಾವಿರ ಸಲ ಸೋತರು ಇನ್ನೊಮ್ಮೆ ಸೋಲುವುದಕ್ಜೆ ಸಿದ್ಧರಾಗಬೇಕು ಎನ್ನುವ ಛಲ ಒಂದಿದ್ದರೆ ಸಾಕು ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ. ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ ಆದರೆ ಸೋಲು ಶಾಸ್ವತ ಅನುಭವ ಕೊಡುತ್ತದೆ ಈ ಜಗತ್ತು ಒಂದು ವಿಶ್ವವಿದ್ಯಾಲಯದಂತೆ ಎಲ್ಲರು ಇಲ್ಲಿ ಇರುವ ತನಕ ಅನುಭವಕ್ಕಾಗಿ ವಿದ್ಯಾರ್ಥಿಗಳಾಗಿ ಬದುಕುವರು ಇದು ಸತ್ಯ

ನನ್ನಲ್ಲಿ ಅದು ಇಲ್ಲ, ಇದು ಇಲ್ಲ ಎಂದು ಕೊರಗುವ ಬದಲು ಬೇರೆಯವರಲ್ಲಿ ಇಲ್ಲದಿರುವ ವಿಶೇಷ ಸಂಗತಿ ನಮ್ಮಲ್ಲಿ ಯಾವುದಾದರೂ ಇರಬಹುದು. ಅದಕ್ಕಾಗಿ ಹೆಮ್ಮೆ ಪಡೋಣ....
ಕಲಿಯುವ ಮನಸ್ಸಿದ್ದರೆ ಪ್ರತಿಕ್ಷಣವೂ ನಮಗೊಂದು ಪಾಠವೇ. ಕೊನೆಯ ಕ್ಷಣದವರೆಗೂ ಕಲಿಕೆಗೆ ಅವಕಾಶವಿದೆ. ಕಲಿಯುತ್ತಲೇ ಸಾರ್ಥಕತೆ ಅನುಭವಿಸೋಣ.
ನಮ್ಮ ಅಸಾಮರ್ಥ್ಯ ಹಣೆಬರಹ ಅಲ್ಲ , ದುರಾದ್ರಷ್ಟವೂ ಅಲ್ಲ .ನಮ್ಮ ಸಾಮರ್ಥ್ಯವೇ ಬೇರೆ, ಹಣೆಬರಹವೇ ಬೇರೆ . ಮಾಡೋದನ್ನು ಸರಿಯಾಗಿ ಮಾಡದಿದ್ದರೆ, ಹಣೆಬರಹ ಹೇಗೆ ನೆಟ್ಟಗಿದ್ದಿತು? ಸಾಮರ್ಥ್ಯ, ದಕ್ಷತೆ, ಕಾರ್ಯಕ್ಷಮತೆಯನ್ನು ಮೆರೆದರೆ ಹಣೆಬರಹವೂ ನಮ್ಮ ಪರವಾಗಿತ್ತದೆ. ಇದು ಕೊಡು ಸತ್ಯ ಗೆಳೆಯರೇ ನಾವು ಕೇವಲ ಬೇರೆಯವರ ಮೇಲಿನ ಗಮನ ಅವರ ತಪ್ಪುಗಳನ್ನು ಗುರುತಿಸುತ್ತಾ ಕಾಲಹರಣ ಮಾಡುವ ಬದಲು ನಮ್ಮ ಮನಸ್ಸಾಕ್ಷಿ ಅನುಗುಣವಾಗಿ ಕನ್ನಡಿಯ ಮುಂದೆ ನಮ್ಮ ಆತ್ಮ ಸಾಕ್ಷಿಗೆ ನಮ್ಮ ತಪ್ಪುಗಳ ಹರಿವನ್ನು ಮಾಡಿದಲ್ಲಿ ಜೀವನದಲ್ಲಿ ಯಾವುದೇ ರೀತಿಯ ಅನ್ಯ ಮಾರ್ಗ ದುರ್ಬುದ್ಧಿ ದುಷ್ಟ ಅನ್ಯರಿಗೆ ಭಯಪಡುವ ಯಾವುದೇ ಸಂದರ್ಭ ನಮ್ಮ ಕೊನೆಯ ಉಸಿರಿರುವ ತನಕ ಬರುವುದಿಲ್ಲ ಮೊದಲು ನಮ್ಮನ್ನು ನಾವು ಗೌರವಿಸೋಣ ಪ್ರೀತಿಸೋಣ ಜೊತೆ ಜೊತೆಗೆ ನಮ್ಮವರನ್ನು ಪ್ರೀತಿಸುತ್ತಾ ಅವರಲ್ಲಿನ ಉತ್ತಮ ಗುಣಲಕ್ಷಣಗಳನ್ನು ಆನಂದ ಕರವಾಗಿ ಸುಂದರ ಕ್ಷಣಗಳನ್ನು ಕಲ್ಪಿಸುವ ಪ್ರಯತ್ನ ಮಾಡೋಣ ಬೇರೆಯವರ ವಿಚಾರವಾಗಿ ಯಾವುದೇ ರೀತಿಯ ಕಾಲಹರಣ ಮಾಡದೆ ಸಮಯದ ಮೌಲ್ಯವನ್ನು ತಿಳಿದು ಜೀವಿಸೋಣ ಗೆಳೆಯರೇ ನಮಸ್ಕಾರ.....

*"ಪಾಂಡಿತ್ಯವುಳ್ಳವರು ಬಹಳ ಮಂದಿ.
*ಆದರೆ ವಿವೇಕವುಳ್ಳವರು ಬಹಳ ಕಡಿಮೆ."
'ಐಶ್ವರ್ಯಕ್ಕೆ ಸೌಜನ್ಯವೇ ಭೂಷಣ.*
*ವಿನಯ ಸಕಲ ಸದ್ಗುಣಗಳ ತಳಹದಿ".
*"ಆತ್ಮ ಶಕ್ತಿ ಇರುವವರನ್ನು ಯಾವ ದುಷ್ಟ ಶಕ್ತಿಯೂ ನಾಶಗೊಳಿಸಲಾರದು"

*ಒಂದು ಮೇಣದ ಬತ್ತಿಯಿಂದ ನೂರಾರು ದೀಪಗಳನ್ನು ಹಚ್ಚಬಹುದು. ಇದರಿಂದ ಆ ಮೇಣದ ಬತ್ತಿಗೆ ಎನೇನೂ ನಷ್ಟವಾಗದು*. *ಅದೇ ರೀತಿ ನಾವೂ ಜೀವನದಲ್ಲಿ ಸಾಧ್ಯವಾದಷ್ಟು ಖುಷಿಯನ್ನು ಹಂಚುವ ಕೆಲಸ*ಮಾಡಬೇಕು. ಇದರಿಂದ ನಾವೇನೂ* *ಕಳೆದುಕೊಳ್ಳುವುದಿಲ್ಲ ನನ್ನವರಿಗಾಗಿ ಒಂದೊಳ್ಳೆ ಸಂದೇಶ*...
*ನಿರ್ಗತಿಕರನ್ನು ಕಂಡರೆ ಕೈಲಾದ ಸಹಾಯ ಮಾಡಿ*
*ಆಗದಿದ್ದರೆ ನಿಂದಿಸಬೇಡಿ, ಮಾನವೀಯತೆಯಿಂದ ವರ್ತಿಸಿ ಮುಂದೆ ಕಳಿಸಿ *ಅವರು ನಮ್ಮತ್ತಿರ ಬಿಕ್ಷ ಬೇಡಲು ಬಂದಿರುವುದಿಲ್ಲ, ಪುಣ್ಯ ನೀಡಲು ಬಂದಿರುತ್ತಾರೆ

*ವಿವೇಕ ವಾಣಿ*
ನಾನು ಉಪನಿಷತ್ತುಗಳನ್ನು ಮಾತ್ರ ಬೋಧಿಸುತ್ತೇನೆ*.
*ನೀವು ಪರೀಕ್ಷಿಸಿದರೆ ಉಪನಿಷತ್ತಲ್ಲದೆ ನಾನು ಬೇರೇನನ್ನೂ ಹೇಳಿಲ್ಲ ಎಂದು ಗೊತ್ತಾಗುವುದು
*ಉಪನಿಷತ್ತುಗಳಲ್ಲಿಯೂ *ಒಂದು ಭಾವನೆಯನ್ನು ಮಾತ್ರ ಬೋಧಿಸುವೆನು. ಅದೇ "ಬಲ". ವೇದ ವೇದಾಂತಗಳ ಸಾರವೆಲ್ಲ ಆ ಒಂದು ಪದದಲ್ಲಿದೆ.


ಚಂದು ವಾಗೀಶ ದಾವಣಗೆರೆ