19 views
ಮೌನ ಸಂಭಾಷಣೆ...
#ಮೌನ_ಸಂಭಾಷಣೆ_ಅವನಲ್ಲಿ........
ಮಾತು ಹೃದಯದಿ ಅಡಗಿದೆ
ಮೌನವೇ ಸುಖಕರವೆನಿಸಿದೆ
ಆಡಲು ಜಿಹ್ವೆಯು ತಡವರಿಸಿದೆ
ಮೌನ ಸಂಭಾಷಣೆಯ ಮೊರೆ ಕೇಳದೆ?!!
ಭಕ್ತಿಯೊಳು ಬೇಡುತಲೆ
ನಿನ್ನ ಚರಣಕೆ ನಮಿಸಿದೆ
ಮನಸು ಕರಗದೇ ನಿನಗೆ
ಕಲ್ಲಾಗೇ ನೀ ಕೂತಿಹೆ!!
ಒಡಲ ಸಂಕಟವರಿಯೆ ನೀನು
ಜಡದ ಮೊರೆ ಹೊಕ್ಕಿಹೆ !!
ಭವದ ನರಕದೊಳೆನ್ನ ದೂಡಿ
ಮೋಹದ ಮಾಯೆಯಲೆನ್ನ ಸಿಲುಕಿಸಿದೆ!!
ಜನುಮಗಳ ಚಕ್ರವ್ಯೂಹದಲಿ ಬಂಧಿಸುತ
ಭವಬಂಧನಗಳ ಸರಪಳಿಯಲಿ ಕಟ್ಟಿ ಹಾಕಿದೆ
ಸಾಕಿನ್ನು ಕಣ್ಣಾಮುಚ್ಚಾಲೆಯಾಟ ಶ್ರೀಹರಿಯೆ
ನಿನ್ನ ಪಾದಧೂಳಿಯೇ ಸಾಕೆನಿಸಿದೆ!!
ಜಗದ ಬಯಲಿನೊಳಗೆ
ಬದುಕು ಬಯಲಾಟದಂತೆ
ಕುಣಿಕುಣಿದು ಸೋತಿಹೆನೀ
ರಂಗಮಂದಿರದೊಳಗೆ!!
ದ್ರೋಹ ಮತ್ಸರದ ಜ್ವಾಲೆಗೆ
ಮನುಜ ಜನುಮ ಸುಡುತಿದೆ
ಪಾಪ ಕರ್ಮಗಳ ಸರಮಾಲೆ
ಬೀಳುತಿಹುದು ಕೊರಳಿಗೆ!!
ಪಾರು ಮಾಡು ಜೀವಜಂತುಗಳ
ಜನ್ಮದ ಮುಖವಾಡಗಳ ರಂಗಿನಿಂದ
ಮನುಜ ಜನ್ಮವು ದೊಡ್ಡದೆನಿಸಿದರೂ
ವಿಷ ತುಂಬಿದ ಆಗರವದೇ ನಿಜವು ಶ್ರೀರಂಗ!!
ಮಧ ಮತ್ಸರದ ಖಜಾನೆಯೊಳಗೆ
ನಾನು ನಾನೆಂಬುದು ಬಂಧಿಯು!!
ಧೂಳಿನ ಕಣವಾದರೂ ಸರಿಯೇ
ಬೇಡ ನರಜನುಮ ಬದುಕಿನ್ಹರಿವ ಅರಿಯದಾದೆ!!
ಆಯಸ್ಸು ಕ್ಷೀಣವಾದರೂ ಸರಿಯೆ
ಪ್ರಾಣಿ ಸಂಕುಲವುತ್ತಮ ದೊರೆಯೆ
ಪಾಪ ಪುಣ್ಯಗಳ ಲೆಕ್ಕಾಚಾರವಿರದವಕೆ
ಸದ್ಗುಣಗಳ ಖಣಿಗಳವು ಅಷ್ಟೇ ಸಾಕು ಬದುಕಿನ ಸಾಕಾರಕೆ!!
✍️ಪೂರ್ವವಾಹಿನಿ
ಮಾತು ಹೃದಯದಿ ಅಡಗಿದೆ
ಮೌನವೇ ಸುಖಕರವೆನಿಸಿದೆ
ಆಡಲು ಜಿಹ್ವೆಯು ತಡವರಿಸಿದೆ
ಮೌನ ಸಂಭಾಷಣೆಯ ಮೊರೆ ಕೇಳದೆ?!!
ಭಕ್ತಿಯೊಳು ಬೇಡುತಲೆ
ನಿನ್ನ ಚರಣಕೆ ನಮಿಸಿದೆ
ಮನಸು ಕರಗದೇ ನಿನಗೆ
ಕಲ್ಲಾಗೇ ನೀ ಕೂತಿಹೆ!!
ಒಡಲ ಸಂಕಟವರಿಯೆ ನೀನು
ಜಡದ ಮೊರೆ ಹೊಕ್ಕಿಹೆ !!
ಭವದ ನರಕದೊಳೆನ್ನ ದೂಡಿ
ಮೋಹದ ಮಾಯೆಯಲೆನ್ನ ಸಿಲುಕಿಸಿದೆ!!
ಜನುಮಗಳ ಚಕ್ರವ್ಯೂಹದಲಿ ಬಂಧಿಸುತ
ಭವಬಂಧನಗಳ ಸರಪಳಿಯಲಿ ಕಟ್ಟಿ ಹಾಕಿದೆ
ಸಾಕಿನ್ನು ಕಣ್ಣಾಮುಚ್ಚಾಲೆಯಾಟ ಶ್ರೀಹರಿಯೆ
ನಿನ್ನ ಪಾದಧೂಳಿಯೇ ಸಾಕೆನಿಸಿದೆ!!
ಜಗದ ಬಯಲಿನೊಳಗೆ
ಬದುಕು ಬಯಲಾಟದಂತೆ
ಕುಣಿಕುಣಿದು ಸೋತಿಹೆನೀ
ರಂಗಮಂದಿರದೊಳಗೆ!!
ದ್ರೋಹ ಮತ್ಸರದ ಜ್ವಾಲೆಗೆ
ಮನುಜ ಜನುಮ ಸುಡುತಿದೆ
ಪಾಪ ಕರ್ಮಗಳ ಸರಮಾಲೆ
ಬೀಳುತಿಹುದು ಕೊರಳಿಗೆ!!
ಪಾರು ಮಾಡು ಜೀವಜಂತುಗಳ
ಜನ್ಮದ ಮುಖವಾಡಗಳ ರಂಗಿನಿಂದ
ಮನುಜ ಜನ್ಮವು ದೊಡ್ಡದೆನಿಸಿದರೂ
ವಿಷ ತುಂಬಿದ ಆಗರವದೇ ನಿಜವು ಶ್ರೀರಂಗ!!
ಮಧ ಮತ್ಸರದ ಖಜಾನೆಯೊಳಗೆ
ನಾನು ನಾನೆಂಬುದು ಬಂಧಿಯು!!
ಧೂಳಿನ ಕಣವಾದರೂ ಸರಿಯೇ
ಬೇಡ ನರಜನುಮ ಬದುಕಿನ್ಹರಿವ ಅರಿಯದಾದೆ!!
ಆಯಸ್ಸು ಕ್ಷೀಣವಾದರೂ ಸರಿಯೆ
ಪ್ರಾಣಿ ಸಂಕುಲವುತ್ತಮ ದೊರೆಯೆ
ಪಾಪ ಪುಣ್ಯಗಳ ಲೆಕ್ಕಾಚಾರವಿರದವಕೆ
ಸದ್ಗುಣಗಳ ಖಣಿಗಳವು ಅಷ್ಟೇ ಸಾಕು ಬದುಕಿನ ಸಾಕಾರಕೆ!!
✍️ಪೂರ್ವವಾಹಿನಿ
Related Stories
20 Likes
16
Comments
20 Likes
16
Comments