8 views
ಕಾರಣ ಹೇಳಿ ಬಿಡೊಮ್ಮೆ
ಅಂದು ಹೃದಯ ಕದ್ದ ಚೆಲುವ
ಇಂದೇಕೆ ಹೇಳದೊರಟೋದೆ
ಪ್ರೀತಿಯಲೇನೋ ಕೊರತೆ ಇತ್ತೆ
ಅರಿಯಲಾಗದ ವೇದನೆಯೊಳು
ಮನ ನಲುಗಿ ಸಾಗಿಹುದು
ನೊಂದು ಬೆಂದು ಹೋದ ಹೃದಯಕೀಗ ಆರದ ಗಾಯ ಮಾಡಿ ಹೋದೆಯಲ್ಲೋ
ಸದಾ ಜೊತೆಯಲಿರುವೆ ಎಂಬ
ಭಾಷೆಯ ನೀಡಿ
ಇಂದೇಕೆ ದೂರ ಹೋದೆಯೋ
ಬದುಕಿಯು ಬದುಕಲಾರಾದಂತೆ ಮಾಡಿಹೆ
ರಂಗು ರಂಗಿನ ಕನಸುಗಳು ನೀಡಿ
ಇಂದೇಕೆ ನನಸಾಗಿಸದೇ ದೂರ ಹೋದೆ
ಬಾಡಿ ಹೋದ ಬಳ್ಳಿಯಿಂದ
ಹೂವು ಮತ್ತೆ ಅರಳಲಾರದಂತೆ ಇಂದೀಗ ನನ್ನ ಪಾಡು ಹೂವಿನಂತೆಯೇ
ತಂತಿ ಹರಿದ ವೀಣೆಯಲ್ಲಿ ಸ್ವರಗಳು ಹೊಮ್ಮಲಾರದಂತೆ
ಇಂದು ನನ್ನ ಪಾಡು ಹೀಗೆಯೇ
ನೀ ತೊರೆದ ಘಳಿಗೆಯಲ್ಲಿಯೇ
ಮನಸು ಕಲ್ಲಾಗಿದೆ
ಬದುಕೆಲ್ಲಿದೆ ನನಗಿನ್ನೂ ಹೇಳೊಮ್ಮೆ
ನಾ ಬಯಸಿದಂತ ಬಾಳೆ
ವಿಷವಾಯಿತೇಕಿಂದು
ನನ್ನ ಬಾಳಿನ ಕನಸೇ
ಪೂರ್ಣವಿರಾಮವಾಗಿ ಹೋಯಿತಲ್ಲವೇ
ಇನ್ನೇನು ಉಳಿದಿಹುದೋ ನನಗೀ ಜೀವನದಿ ಉತ್ತರವ ನೀಡಲಾದರು ಒಮ್ಮೆ ಬರುವೆಯ
ರಾಧಿಕಾ ಗಿರೀಶ್ ಮಯ್ಯ
ಬಿ ಸಿ ರೋಡ್
Related Stories
7 Likes
6
Comments
7 Likes
6
Comments