5 views
ಗಝಲ್
ಗಝಲ್
ಒಲವಿನ ಇಟ್ಟಿಗೆಯಲ್ಲಿ ಮನೆಯ ಕಟ್ಟಿರಲು ಕೂಲಿಯ ಕೇಳಿದೆ ಏಕೆ
ಎದೆಯಲಿ ಹುದುಗಿದ ನೋವುಗಳಿಗೆ ಬೇಲಿಯ ಹಾಕಿದೆ ಏಕೆ
ಒಂದೇ ಒಂದು ಜನ್ಮದಲ್ಲಿ ಎಲ್ಲವನ್ನು ಅನುಭವಿಸಿ ಆಯ್ತು
ನಾಳೆ ಎಂಬುದನಿಟ್ಟು ನನ್ನ ಇಂದು ನರಳಿಸಿದೆ ಏಕೆ
ಕಡು ಕಷ್ಟಗಳ ಹಾದಿ ಸವೆಸಿ ಸೋತುಹೋಗಿರುವೆ
ಅದು ಗೊತ್ತಿದ್ದರೂ ಮತ್ತೆ ಮತ್ತೆ ಪರೀಕ್ಷಿಸಿದೆ ಏಕೆ
ವಿರಹದ ಬೇಗೆಯಲಿ ಖುಷಿಯ ಹಸಿರು ಒಣಗಿದೆ
ನೀನು ಪ್ರೀತಿಯ ನಾಲ್ಕು ಹನಿ ಚೆಲ್ಲದೆ ಹೋದೆ ಏಕೆ
ನಗುವ ಕಾಡು ಕಡಿದು ಬರಗಾಲ ತಂದೆ ಅಮು
ಇನ್ನು ಉಳಿಗಾಲವಿಲ್ಲವೆಂದಾದ ಮೇಲೆ ಬದುಕಿಸಿದೆ ಏಕೆ
೦೪೦೬ಎಎಂ೧೯೦೪೨೦೨೪
*ಅಮು ಭಾವಜೀವಿ ಮುಸ್ಟೂರು*
© All Rights Reserved* *
ಒಲವಿನ ಇಟ್ಟಿಗೆಯಲ್ಲಿ ಮನೆಯ ಕಟ್ಟಿರಲು ಕೂಲಿಯ ಕೇಳಿದೆ ಏಕೆ
ಎದೆಯಲಿ ಹುದುಗಿದ ನೋವುಗಳಿಗೆ ಬೇಲಿಯ ಹಾಕಿದೆ ಏಕೆ
ಒಂದೇ ಒಂದು ಜನ್ಮದಲ್ಲಿ ಎಲ್ಲವನ್ನು ಅನುಭವಿಸಿ ಆಯ್ತು
ನಾಳೆ ಎಂಬುದನಿಟ್ಟು ನನ್ನ ಇಂದು ನರಳಿಸಿದೆ ಏಕೆ
ಕಡು ಕಷ್ಟಗಳ ಹಾದಿ ಸವೆಸಿ ಸೋತುಹೋಗಿರುವೆ
ಅದು ಗೊತ್ತಿದ್ದರೂ ಮತ್ತೆ ಮತ್ತೆ ಪರೀಕ್ಷಿಸಿದೆ ಏಕೆ
ವಿರಹದ ಬೇಗೆಯಲಿ ಖುಷಿಯ ಹಸಿರು ಒಣಗಿದೆ
ನೀನು ಪ್ರೀತಿಯ ನಾಲ್ಕು ಹನಿ ಚೆಲ್ಲದೆ ಹೋದೆ ಏಕೆ
ನಗುವ ಕಾಡು ಕಡಿದು ಬರಗಾಲ ತಂದೆ ಅಮು
ಇನ್ನು ಉಳಿಗಾಲವಿಲ್ಲವೆಂದಾದ ಮೇಲೆ ಬದುಕಿಸಿದೆ ಏಕೆ
೦೪೦೬ಎಎಂ೧೯೦೪೨೦೨೪
*ಅಮು ಭಾವಜೀವಿ ಮುಸ್ಟೂರು*
© All Rights Reserved* *
Related Stories
0 Likes
0
Comments
0 Likes
0
Comments