...

6 views

ಮುಸ್ಸಂಜೆ ಕವನ
ಮಬ್ಬು ಸರಿದಿದೆ ಸುಬ್ಬನ ಕಾಯುತ್ತಾ
ಕುಂತಲ್ಲೇ ಕಲ್ಲಾದೆ ಅಹಲ್ಯೆಯಂತೆ

ಚಂದಿರನ ನೋಡುತ್ತಾ
ಮಂದಿರವ ಮರೆತೇ

ಮಿತಿ ಮೀರಿದೆ ಮನಸು
ಹಿತವಾಗಿತ್ತು ಕನಸು...ಆಹಾ..

ಬೆಳದಿಂಗಳ ರಾತ್ರಿಯಲಿ
ಕಚಗುಳಿ ಇಡುತ್ತ ತಂಗಾಳಿಯು
ಸುಯ್ ಗುಡಲು

ಭಾವನೆಗಳೆಲ್ಲಾ ಕಣ್ಮುಂದೆ
ಲಂಗು ಲಗಾಮು ಇಲ್ಲದೆ
ಕುಣಿದಾಡಲು ....

ಕಾರಣ ನೀನೇ ಎಂದು ತಿಳಿದೂ
ಬರಲಿಲ್ಲವೇಕೆ ....ಹುಡುಗಾ.
ಏಕಾಂತದಿ ಕಾದಿದ್ದೆ ನಿನಗಾಗಿ...
ಮನದ ಅಂಗಳದಿ......


ದೇವಿ ✍️