...

3 views

ಕನ್ನಡಮ್ಮನ ಮಕ್ಕಳು
ಕನ್ನಡಮ್ಮನ ಮುದ್ದಿನ ಕಂದಮ್ಮಗಳಿರಾ
ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಿ!
ಒಂದು ದಿನಕ್ಕಾಗಿಯಲ್ಲ ಇದು,
ನೆಲ ಜಲ ಜೀವನಕ್ಕಾಗಿ ಪಣವ ತೊಡಿ!!

ಕನ್ನಡ ಭಾಷೆಯಲಿ ಹೊನ್ನಿನ ಕಳೆಯಿದೆ
ಆತ್ಮೀಯತೆಯ ಸ್ಪರ್ಶವಿದೆ!
ಮಾನವೀಯ ಮೌಲ್ಯವ ಸಾರುತ
ಜಾತ್ಯಾತೀತ ಸೆಳೆತವಿದೆ..

ಕಲ್ಪತರು ಸಿಹಿನೀರಿನ ಅಭಿಷೇಕ
ದಣಿವ ಇಂಗಿಸಲು ಆಲದನೆಳಲು
ಹಸಿರನೇ ತೊಟ್ಟು ನಿಂತಿಹ ಸೊಬಗು
ಗಿಣಿ, ಕೋಗಿಲೆಗಳ ಹೊಗಳಿಕೆ ಸೊಗಸು

ಹೊಸತೇನುಂಟು ಹುಡುಕಲು ಹೊರಟರೆ
ವಿವಿಧತೆಯ ಮಿನುಗು ಎಲ್ಲ ಕಡೆ..
ಬೆಳೆಯುತ ಒಂದೆಡೆ ಬೆಳೆಸುವ ಮನವು
ಹಿರಿಯರೇ ಕಿರಿಯರಿಗೆ ಸ್ಪೂರ್ತಿಸೆಲೆ..

© Writer Sindhu Bhargava