...

9 views

ಪರಂಪರೆ..
ಶ್ರೇಷ್ಠತೆಯಲ್ಲಿ ಉತ್ಕೃಷ್ಟ ಕನ್ನಡ ನಾಡಿನ ಪರಂಪರೆ
ಸಾಹಿತ್ಯ ಸಂಸ್ಕೃತಿಗೆ ನಮ್ಮೀ ಕರ್ನಾಟಕವೇ ದೊರೆ
ಕರುನಾಡ ಕವಿಸುಪುತ್ರರೇ ಜ್ಞಾನ ದೇಗುಲಕೆ ಕನ್ನಡಿ
ಶಸ್ತ್ರ ಶಾಸ್ತ್ರದ ಅಗಣಿತ ಸಂಪತ್ತಿಗೆ ನಮ್ಮ ಮುನ್ನುಡಿ..

ರಸ ಋಷಿಗಳ ತಪಸ್ಸಿಗೆ ಶಾಂತಿ ನೆಮ್ಮದಿಯ ತಾಣ
ವಿಧ ವಿಧವಾದ ಕಲೆಗಳಿಗೆ ಕರುನಾಡೇ ಮೇರುಗಣ
ಶಿಲ್ಪಕಲೆಗೆ ಹೆಸರುವಾಸಿ ನಮ್ಮಯ ಈ ತವರೂರು
ಹಸಿರನೇ ಉಸಿರಾಗಿಸಿ ಉದರ ಕಾಯುವ ರೈತರು..

ಆಚಾರ ವಿಚಾರಗಳ ಮೇರುಪರ್ವತದ ಸಂಕೀರ್ಣ
ಭುವನೇಶ್ವರಿ ನೆಲೆ ನಂಬಿದವನ ಬದ್ಕು ಸಂಪೂರ್ಣ
ಗಡಿಯಾಚೆಗೂ ಕನ್ನಡಾಂಬೆಯದೇ ವಿಶಿಷ್ಟ ಕೂಗು
ಅರಿಶಿಣ ಕುಂಕುಮ ಲೇಪಿತ ಉಡುಗೆಯ ಮೆರುಗು..

ನಂಬಿ ಬಂದವರ ಶಿರ ಕಾಯುವ ತಾಯಿಯ ಗುಣ
ಕಲೆ,ಕುಣಿತ,ಗಾನ, ಜಾನಪದದ ಭವ್ಯ ಸಭಾಂಗಣ
ಪ್ರೀತಿ, ವಾತ್ಸಲ್ಯಕೆ ಕನ್ನಡಿಗರ ಮನವೇ ರಾಯಭಾರಿ
ಕನ್ನಡ ನಾಡಿನ ಪರಂಪರೆಯೇ ಬದುಕಿಗೆ ರಹದಾರಿ..

#Kannada #Kannadaquote #vijaykumarvm #ವಿಬೆಣ್ಣೆ

© ವಿಜು ✍ 💞