...

1 views

ಕನ್ನಡದವೇ ನಿತ್ಯ ಕನ್ನಡವೇ ಸತ್ಯ
ಕನ್ನಡದ ಅಕ್ಷರ ಮಾಲೆ
ವಜ್ರ ಹವಳದ ಸರಮಾಲೆ
ಕನ್ನಡತನವೇ ನಮ್ಮನೆಲೆ
ಕಪ್ಪುಮಣ್ಣಿನ ಶ್ರೀಮಂತ ಬೆಲೆ
ಅರಿಶಿಣ ಕುಂಕುಮಕ್ಕೆ ವಿಶೇಷ ಬೆಲೆ
ಅದಕ್ಕೆ ದೊರೆತಿವೆ ಎಂಟು ಜ್ಞಾನಪೀಠಗಳ ಸರಮಾಲೆ.!!

ಅನ್ಯ ಭಾಷೆಗಳ ತವರೂರು ಕನ್ನಡ
ಪ್ರತಿ ನುಡಿಯು ರತ್ನ ಹವಳ ಕನ್ನಡ
ಶಾಸ್ತ್ರೀಯ ಭಾಷೆಯ ಮೆರಗು ಕನ್ನಡ
ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ ಕನ್ನಡ
ಶಾಂತಿ-ಸೌಹಾರ್ದತೆಯ ಭಾಷೆ ಕನ್ನಡ
ಪರಭಾಷೆಯು ಪ್ರೀತಿಸುವ ಉಧಾರತೆಯ ಹೃದಯ ಕನ್ನಡ.!!

ಕನ್ನಡತನದ ಕಾಳಜಿ ಕಳಕಳಿಯಿರಲಿ
ಪರ ಭಾಷೆಗಳು ನಮ್ಮ ಸಂಬಂಧಿಕರಾಗಲಿ
ಮಾತೃಭಾಷೆ ಪ್ರತಿಕ್ಷಣ ನಿತ್ಯೋತ್ಸವವಾಗಲಿ
ಕನ್ನಡ ಭಾಷೆ ಅವಮಾನಿಸದೆ ಅಭಿಮಾನವಾಗಲಿ
ನವೆಂಬರ್ ತಿಂಗಳಿಗೆ ಮಾತ್ರ ಮೀಸಲಾಗದಿರಲಿ
ಕನ್ನಡ ಉಳಸಿ ಬಳಸಿ ಬೆಳೆಸಿ ನಿತ್ಯನೂತನವಾಗಿರಲಿ.!!

ರಚನೆ: ಚಂದು ವಾಗೀಶ ದಾವಣಗೆರೆ