...

7 views

ವಿರಹ

ಅರೆಕ್ಷಣದ ಆರಾಧಕ ನಾನಲ್ಲ
ಅರೆಗಳಿಗೆಯು ಬಿಟ್ಟು ಬದುಕಲ್ಲ
ಅಂಜಿ ಅಳ್ಕುತಿವೆ ಮನ್ದ ಭಾವವೆಲ್ಲ
ಅಸ್ಪಷ್ಟವಾಗಿದೆ ನೀನಿರದ ಈ ಕ್ಷಣಗಳೆಲ್ಲ..!!!

ಅಂಧಕಾರ ಕವಿದಿದೆ ಮನ್ದ ಮುಗಿಲು
ಅತ್ತಿಂದಿತ್ತ ಕದ್ಡದೆ ಮೌನವ್ಗಾದೆ ನವಿಲು
ಉಸಿರು ಹೊರ ಹೊಮ್ಮುತ್ತಿಲ್ಲ ಕೊಳಲು
ರಾಶಿ ಕನಸುಗಳು ಬಿಕಾರಿಯ್ಗಾವೆ ಬೀದಿ ಪಾಲು..!!!

ಕಂಬನಿ ಕವಲೊಡೆದಿದೆ ಕಣ್ಣಂಚಲಿ
ಮಡಿದ ಸ್ವಪ್ನಗಳಿಗೆ ಮೌನ ಲಾಲಿ
ಬಯಕೆಗಳು ಬತ್ತಿವೆ ಬತ್ತಳಿಕೆಯಲಿ
ನೀ ಹೋದಮೇಲೆ ಎಲ್ಲಾ ಖಾಲಿ ಖಾಲಿ..!!!

ಬೆಲೆ ತಿಳಿಸಿ ಮರೆಯಾಗುವುದ ಕಾಲ
ಅರಿಯದೆ ಹೋದೆ ಬದುಕಿನ ಜಾಲ
ಪ್ರತಿಕ್ಷಣ ನನ್ನ ಹೆಜ್ಜೆಗೆ ನಿನ್ನ ಹೆಜ್ಜೆ ಬಲ
ಮತ್ತೆ ಬರುವೆಯ ಕನಸುಗಳನ್ನು ಬಿತ್ತೋನ
ಹದಗೊಂಡಿದೆ ಹೃದಯ್ದ ಹೊಲ..!!!
☛✍ಸಿದ್ದರಾಜಗುರು ಎಸ್ V☛✍
#siddraajguru #ಪದಯಾತ್ರೆ #ಭಾವನೆಗಳಮಿಂಚು