...

17 views

ಭಾವಗಳು....
ಕೊಳೆಯುತಿದೆ
ಎದೆಯೊಳಗಲ್ಲಿ
ನೋವಿನ ಭಾವಗಳು
ತೋಡಿ ಹೊರಹಾಕಲಾಗದೆಯೇ
ಅಳುತಿದೆ ಸೋತ ಮನಸು
ನೆನಪಿಸುತಿದೆ ನಂಬಿಕೆಯಲಿ
ಇರಿದ ಗಾಯಗಳು!!

ಒಂದೊಮ್ಮೆ ಬೆನ್ನು ತಟ್ಟಿತ್ತು
ನಮ್ಮವರು ಎಂಬ ಅನುಭಾವ
ಮುನ್ನುಗ್ಗಿ ಬದುಕು ಎಲ್ಲರ ಒಳಿತಿಗಾಗಿ
ಎಂದಿತ್ತು ಛಲದನುರಾಗ
ಬಾಳಬೇಕು ಎಲ್ಲರೊಡನೆ ಬೆರೆತು
ಅನುರಾಗದಿ ಕಂಡಿತ್ತು ಕನಸು!!

ಮುಗಿಯಿತು ಬದುಕು ದಡ ಸೇರಿ
ಏನಿತು ಕೆಲಸ ನಿನ್ನದಿಲ್ಲಿ ನಡೆ ಎಂಬ ನಿರ್ಲಕ್ಷ್ಯ
ಅನುದಿನದ ಶ್ರಮ ಬೆವರ ಹನಿಗೆ ಲೆಕ್ಕವೇ ಇಲ್ಲ
ಎಣಿಸಿ ಎಣಿಸಿ ತುಂಬಿಹರಲ್ಲಿ ಫ್ರತಿಫಲದನುಭಾವದಲಕ್ಷ!!
ಪಾರದರ್ಶಕತೆಯ ವಾತ್ಸಲ್ಯಕೆ
ಬೆಲೆ ಏನುಂಟು?
ಹೊಟ್ಟೆ ತುಂಬಿದ ಮೇಲೆ
ಹಸಿವಿಗೇನು ನಂಟು?
ದಡ ಸೇರಿದ ಮೇಲೆ
ದೋಣಿಯ ಹಂಗೆನಿತು?
ಕಡಲಮದ್ಯೆ ತೇಲುವಾಗಷ್ಟೇ ಅಂಬಿಗನ ನೆನಪು!!
✍️ಶೋಭಾ ನಾರಾಯಣ.