...

10 views

ಬೆಂಕಿಯಲ್ಲಿ ಬೆಂದ ಮನಸು
ತಾಳಲಾರೆನು ಬಾಳಲಾರೆನು
ಈ ಬಿಸಿಲು ಬೇಗೆಯಂತ
ಕಡು ಕಷ್ಟದಲಿ.

ಕೇಳದೆ ಬರೆದ ಬ್ರಹ್ಮನ
ಈ ಬರಹಕ್ಕೆ ತುತ್ತಾದ
ನನ್ನೀ ಬದುಕಿಗೆ ಹೊಣೆಯಾರು.?

ಬೆಂಕಿಯಲ್ಲಿ ಬೆಂದ ಮನಸಿಗೆ
ತುಪ್ಪ ಸುರಿಯುವರನೇಕ

ಒಪ್ಪ ಓರಣ ಮಾಡುವ
ಮಂದಿ ಮರೆಯಾಗಿಹರು
ಸಂಬಂಧಿಕರು..

ಬದುಕಿನ ಬೆಂಕಿಯಲಿ
ಕನಸುಗಳು ಬಿದ್ದು
ನಿಗಿ ನಿಗಿ ಕೆಂಡವಾಗಿ..

ಇತ್ತ. ಉರಿಯದೆ..
ಅತ್ತ. ಆರದೇ..
ಹೊಗೆಯಾಡುತಿಹುದು...


ದೇವಿ✍️