10 views
ಬೆಂಕಿಯಲ್ಲಿ ಬೆಂದ ಮನಸು
ತಾಳಲಾರೆನು ಬಾಳಲಾರೆನು
ಈ ಬಿಸಿಲು ಬೇಗೆಯಂತ
ಕಡು ಕಷ್ಟದಲಿ.
ಕೇಳದೆ ಬರೆದ ಬ್ರಹ್ಮನ
ಈ ಬರಹಕ್ಕೆ ತುತ್ತಾದ
ನನ್ನೀ ಬದುಕಿಗೆ ಹೊಣೆಯಾರು.?
ಬೆಂಕಿಯಲ್ಲಿ ಬೆಂದ ಮನಸಿಗೆ
ತುಪ್ಪ ಸುರಿಯುವರನೇಕ
ಒಪ್ಪ ಓರಣ ಮಾಡುವ
ಮಂದಿ ಮರೆಯಾಗಿಹರು
ಸಂಬಂಧಿಕರು..
ಬದುಕಿನ ಬೆಂಕಿಯಲಿ
ಕನಸುಗಳು ಬಿದ್ದು
ನಿಗಿ ನಿಗಿ ಕೆಂಡವಾಗಿ..
ಇತ್ತ. ಉರಿಯದೆ..
ಅತ್ತ. ಆರದೇ..
ಹೊಗೆಯಾಡುತಿಹುದು...
ದೇವಿ✍️
ಈ ಬಿಸಿಲು ಬೇಗೆಯಂತ
ಕಡು ಕಷ್ಟದಲಿ.
ಕೇಳದೆ ಬರೆದ ಬ್ರಹ್ಮನ
ಈ ಬರಹಕ್ಕೆ ತುತ್ತಾದ
ನನ್ನೀ ಬದುಕಿಗೆ ಹೊಣೆಯಾರು.?
ಬೆಂಕಿಯಲ್ಲಿ ಬೆಂದ ಮನಸಿಗೆ
ತುಪ್ಪ ಸುರಿಯುವರನೇಕ
ಒಪ್ಪ ಓರಣ ಮಾಡುವ
ಮಂದಿ ಮರೆಯಾಗಿಹರು
ಸಂಬಂಧಿಕರು..
ಬದುಕಿನ ಬೆಂಕಿಯಲಿ
ಕನಸುಗಳು ಬಿದ್ದು
ನಿಗಿ ನಿಗಿ ಕೆಂಡವಾಗಿ..
ಇತ್ತ. ಉರಿಯದೆ..
ಅತ್ತ. ಆರದೇ..
ಹೊಗೆಯಾಡುತಿಹುದು...
ದೇವಿ✍️
Related Stories
13 Likes
1
Comments
13 Likes
1
Comments