...

10 views

ಸಮರ್ಪಣೆ
ಮಾಧವಾ ಕೃಷ್ಣಾ ಮಧುಸೂದನ!
ನಿನಗಾಗಿ ಅರ್ಪಣೆ ಈ ನನ್ನ ಗಾನ.
ಮಿಡಿದಿದೆ ಎದೆಯು ಪ್ರೀತಿಯ ತಾನ,
ನಿನಗಾಗಿ ಮಾಡಿಹೆ ಮುಗಿಯದ ಧ್ಯಾನ!

ಮುರುಳಿಯ ನಾದವ ಕೇಳಿಸು ನೀನು,
ಮನದಲಿ ಅದನೇ ತುಂಬುವೆ ನಾನು!
ಮತ್ತೆಮತ್ತೆ ನಿನ್ನನು ಕಾಡುವೆನೇನು?
ಮನದಲೆ ತುಂಬಿರೆ ಸವಿಯಾದ ಜೇನು!

ಕಾದಿವೆ ಕಂಗಳು ನಿನ್ನಯ ದರ್ಶನಕೆ,
ಬೆಳಕನು ತೋರಿಸು ಈ ನನ್ನ ಮನಕೆ.
ಉತ್ತರ ದೊರೆಯಲಿ ಕಾಡುವ ಜಗಕೆ,
ಪಾವಿತ್ರ್ಯ ಸಿಗಲಿ ನನ್ನಯ ಜನುಮಕೆ.

ನಿನಗಾಗಿ ನಾನು ಹಾತೊರೆದಿರಲು,
ತೆರೆಯೋ ಬೇಗ ನಿನ್ನೆದೆ ಬಾಗಿಲು.
ನದಿಗಳು ಹರಿದು ಸೇರಿವೆ ಕಡಲು,
ಮೀರೆಯು ಬಂದಳು ನಿನ್ನನು ಸೇರಲು!

© ಕೃಷ್ಣಕವಿ
#ಕೃಷ್ಣಕವಿ #ಮೀರಾ #ಸಮರ್ಪಣೆ