...

2 views

ಕನ್ನಡ ರಾಜ್ಯೋತ್ಸವ
ದೇಹದೊಳ ನೆತ್ತರವು ಹರಿದು ಕನ್ನಡಾಂಬೆಗೆ ಅಭಿಷೇಕವಾಗಲಿ
ಸೂರ್ಯನ ಕಿರಣವು ಚಾಚಿ ಕನ್ನಡಾಂಬೆಗೆ
ಹಣೆಯ ಭಂಡಾರ ವಾಗಲಿ

ಓ ಮಾತೆ ನೀನಿತ್ತ ಪ್ರತಿ ಅಕ್ಷರದೊಳು
ಬೆಳಕಿನ ಹೊನಲು
ನಾವಾಡುವ ಪ್ರತಿ ಕನ್ನಡ ನುಡಿಯಲು
ನುಡಿಸಿವುದು ಇಂಪಾದ ಕೊಳಲು

ನೀನಿಡುವ ಪ್ರತಿ ಹೆಜ್ಜೆಯಲು
ಕನ್ನಡ ಡಿಂಡಿಮದಲಿ ಹೂಗಳ ನರ್ತನ
ಇಂಪಿಸುತ ಕನ್ನಡ ಗೀತೆಯು
ಸೋಂಪಾದ ಉಸಿರಿನ ಕನ್ನಡಿಗರ ತನುಮನ.

ಪ್ರತಿ ಜನುಮದಲೂ ಸಂಭ್ರಮಿಸಲಿ
ಕನ್ನಡ ಸಂಸ್ಕೃತಿಯ ಉತ್ಸವ
ಈ ಕನ್ನಡ ರಾಜ್ಯೋತ್ಸವ..






© Altaf mulla