...

8 views

ಒಲವ ಕವಿತೆ
ಕಡಲಲೆಯಂತೆ ಮತ್ತೆ ಮತ್ತೆ
ಎದೆಯತೀರಕಪ್ಪಳಿಸಿದ್ದೆ ಅಂದು.,
ಕಗ್ಗತ್ತಲ ಕಾನನದಿ ದಾರಿ ಕಾಣದೆ
ಕಂಗಾಲಾಗಿರುವೆ ನಾನಿಂದು..

ಕರಪಿಡಿದು ಜೊತೆ ನಡೆವ
ಭರವಸೆಯ ಹೊತ್ತು ನೀ ಬಂದೆ.,
ಕನಸಲೂ ಬಾರದೆ ಮನ
ಕಂಗೆಡಿಸಿ ಇಂದೇಕೆ ಕನಸ ಕೊಂದೆ..

ನಾ ಗೀಚುವ ಪ್ರತಿ ಸಾಲಿನಲೂ
ನಿನ್ನದೇ ಛಾಯೆ ಮೂಡಿಸಿದ್ದೆ.,
ಇಂದೇಕೋ ಲೇಖನಿಗೂ ಬೇಸರ
ತರಿಸಿ ಕವನದಿಂದ ಎದ್ದೋಗಿದ್ದೆ..

ಮಾತುಗಳ ಜಾತ್ರೆಯಲಿ ಜಗವ
ಮರೆತು ಮೆರೆದ ನಮ್ಮೀ ಮನಗಳು.,
ಕೊನೆಯಾಗದ ಒಲವ ಕವಿತೆಗೆ
ಮೌನದಲೇ ಮರುಗುತಿವೆ ಪದಗಳು..
#Kannada #Kannadaquote #vijaykumarvm #ವಿಬೆಣ್ಣೆ

© ವಿಜು ✍ 💞