...

13 views

ಮುಕ್ತಿ
ಬರುವಾಗ ಖಾಲಿ..ಮರಳಿ
ಹೋಗುವಾಗಲೂ ಖಾಲಿ....
ಮಧ್ಯೆ ಮೂರು ದಿನದ ಬಾಳಿಗೇಕೆ
ಇಲ್ಲ ಸಲ್ಲದ ಆಸೆಗಳ ಖಯಾಲಿ?
ಏನಿಲ್ಲ ಎಂದರೂ ಬದುಕುವ ಛಲ
ನಿಚ್ಚಳವಾಗಿರಬೇಕು
ಆಸೆಗಳಿಗೆ ಖಡಿವಾಣ ಹಾಕುತ
ಹಾಸಿಗೆ ಇರುವಷ್ಟು ಕಾಲು ಚಾಚಿ
ಬಾಳಬೇಕು...
ಕೊಡುವವನೂ ಅವನೇ ,ಕಸಿದುಕೊಳ್ಳುವವನೂ ಅವನೇ
ಇತಿಮಿತಿಗಳ ಬದುಕಲಿ ಬಾಳುವ ಮನಕೆ
ಆಗದೆಂದಿಗೂ ಅತೃಪ್ತಿ
ಎಷ್ಟೇ ಇದ್ದರೂ ಕೊನೆಯಲ್ಲಿ ಸೇರುವುದು
ಶೂನ್ಯ...
ಮಣ್ಣಿನ ಮಡಿಲೊಳಗೆ ಮಲಗಿದ ಮೇಲೇ
ದೊರೆವುದು ಜೀವನ್ಮುಕ್ತಿ .‌‌‌‌....
👀ಪೂರ್ವವಾಹಿನಿ.