ಪ್ರಕೃತಿಯ ಪಿಸುಮಾತು
ಪ್ರಕೃತಿಯೊಂದನು ಬಿಡದೆ
ವಿಕೃತಿ ಗೈಯುವ ಮನುಜ
ನಿನ್ನ ಇರವನು ಮರೆತು
ನಡೆಯಬೇಡ॥
ಇಂದು ನಿನ್ನಯ ಹೀನ ಸ್ಥಿತಿಯನು
ನೆನೆದು ಕಂಬನಿ ಮಿಡಿದು ನರನೇ
ಹೇಳುವೆನು ಕಿವಿ ಮಾತನು॥
ಮನುಜ ನಿನ್ನಯ ದುರಾಸೆಗೆ
ನೀಡೊಂದು ಅಂತ್ಯವನು
ನನ್ನೊಳಿರುವಾ ಜಲದ ಮೂಲವ
ಮಾಯವಾಗಿಸದಿರು॥
ವನದ ಐಸಿರಿ ತುಂಬಿ ತುಳುಕಲಿ
ಜೀವಸಂಕುಲ ನಕ್ಕುನಲಿಯಲಿ
ಜಗದ ಸೊಬಗದು ಉಕ್ಕುತಿರಲಿ
ಎಂಬ ಮಾತನು ಉಸುರಿತು॥
ಜಿಹ್ವೆ ಚಪಲಕೆ ಮನವ ಕೊಟ್ಟು
ಹೊಟ್ಟೆ ತೊಟ್ಟಿಯ ಮಾಡಿ
ಕಸವ ಎಸೆಯುತ ಹಾಳುಗೆಡವಿ
ನನ್ನ ಒಡಲನು ಕೆಡಿಸಬೇಡ॥
ನದಿಯ ನೀರಿಗೆ ಕೊಳಚೆ ಸೇರಿಸಿ
ಜೀವಜಲವನು ಮಲಿನಗೊಳಿಸದೆ
ಜಗದ ಕಂಬನಿ ಒರೆಸುತಾ
ಒಳಿತು ಮಾಡುತ ಬದುಕು ನೀನು॥
ಇನಿತು ದುಃಖವ ತಾಳಲಾರೆ
ಮನದ ಬೇಗುದಿ ಹೇಳಲಾರೆ
ನನ್ನ ಜೀವವ ಉಳಿಸು ನೀನು
ನಿನ್ನ ಬಾಳನು ಹರಸುವೆ ನಾನು॥
ವಿಕೃತಿ ಗೈಯುವ ಮನುಜ
ನಿನ್ನ ಇರವನು ಮರೆತು
ನಡೆಯಬೇಡ॥
ಇಂದು ನಿನ್ನಯ ಹೀನ ಸ್ಥಿತಿಯನು
ನೆನೆದು ಕಂಬನಿ ಮಿಡಿದು ನರನೇ
ಹೇಳುವೆನು ಕಿವಿ ಮಾತನು॥
ಮನುಜ ನಿನ್ನಯ ದುರಾಸೆಗೆ
ನೀಡೊಂದು ಅಂತ್ಯವನು
ನನ್ನೊಳಿರುವಾ ಜಲದ ಮೂಲವ
ಮಾಯವಾಗಿಸದಿರು॥
ವನದ ಐಸಿರಿ ತುಂಬಿ ತುಳುಕಲಿ
ಜೀವಸಂಕುಲ ನಕ್ಕುನಲಿಯಲಿ
ಜಗದ ಸೊಬಗದು ಉಕ್ಕುತಿರಲಿ
ಎಂಬ ಮಾತನು ಉಸುರಿತು॥
ಜಿಹ್ವೆ ಚಪಲಕೆ ಮನವ ಕೊಟ್ಟು
ಹೊಟ್ಟೆ ತೊಟ್ಟಿಯ ಮಾಡಿ
ಕಸವ ಎಸೆಯುತ ಹಾಳುಗೆಡವಿ
ನನ್ನ ಒಡಲನು ಕೆಡಿಸಬೇಡ॥
ನದಿಯ ನೀರಿಗೆ ಕೊಳಚೆ ಸೇರಿಸಿ
ಜೀವಜಲವನು ಮಲಿನಗೊಳಿಸದೆ
ಜಗದ ಕಂಬನಿ ಒರೆಸುತಾ
ಒಳಿತು ಮಾಡುತ ಬದುಕು ನೀನು॥
ಇನಿತು ದುಃಖವ ತಾಳಲಾರೆ
ಮನದ ಬೇಗುದಿ ಹೇಳಲಾರೆ
ನನ್ನ ಜೀವವ ಉಳಿಸು ನೀನು
ನಿನ್ನ ಬಾಳನು ಹರಸುವೆ ನಾನು॥