...

7 views

ಕೋರೋಣ ಪರಿಪಾಠ

ಫಳ ಫಳ ಹೊಳೆಯುವ ಸೂರ್ಯನ ಕಿರಣದಿ.
ಜಗದ ಪ್ರತಿ ಜೀವಿಗಳ ಸುಖದ ಜೀವನದ ಪಯಣದಿ.
ದಿಗಿಲು ತರಿಸಿತು ಇದ್ಯಾವ ಕೋರೋಣ ಕೆಡಿಸಿತು ಜಗದ ನೆಮ್ಮದಿ.
ಯಾವ ಮನುಜನು ತರುವನೋ ಇದಕ್ಕಿಲ್ಲಿ ವಿನಾಶದ ಔಷದಿ.

ಕಾಣಲಾರೆನಾ ದೇಶ ದೇಶಕೂ ಹಬ್ಬಿದ ಕೊರೊನದ ಘೀ ಳು.
ಪರಿತಪಿಸುತ್ತಿರುವರು ತಡೆಗಟ್ಟಲು ಜೋಡಿಸುತ ತಮ್ಮ ತಮ್ಮ ಕೈ ತೋಳು.
ಇನ್ನೆಷ್ಟು ಜನರ ಬಲಿ ತೆಗೆದುಕೊಳ್ಳುವುದೋ ಈ ಜಗದೊಳು.
ಉಸಿರಾಟದಿ ಬಂದು ಹರಿಹಾಯ್ದು ಕೊಲ್ಲುತಿದೆ ಜನರ ಕೊರಳು.

ಭೂಮಿಗೆ ಅಂಟಿಕೊಂಡಿತು ಕಂಡು ಕಾನರಿಯದ ಕೋರೋಣ ರೋಗ.
ಇಲ್ಲೆಯೇ ಇತ್ತ? ಇದಕೆ ಸಾವುಗಳ ಸರಮಾಲೆಯ ಕೊಂಡೊಯ್ಯುವ ಜಾಗ.
ಹಬ್ಬುತ್ತಿದೆ ಜನರ ಜನರಿಗೂ ದೇಶ ದೇಶಕೂ ತುಂಬಾ ಸರಾಗ.
ವೈದ್ಯ ದಾದಿಗಳು ಚಡಪಡಿಸುತ್ತಿರುವರು ಜನರ ಉಳಿಸಲು ಕೊಡುತ ತಮ್ಮ ಪರಿತ್ಯಾಗ.

ನಿದ್ದೆಗೆಡಿಸಿತು ಸುಳಿಸುಳಿದಾಡುತ ಬಂದು ಕೊರೊನದ ಕಾಟ.
ಆದರೂ ಬಿಡಿತ್ತಿಲ್ಲ ಜನ ಮದ್ಯ, ಸಿಗರೇಟ್, ತಂಬಾಕಿನ ಚಟ.
ಹಣದ ಅಮಲಿನಲ್ಲಿ ಮೆರೆಯುವ ಜನಕೆ ಕಲಿಸಿತು ತಕ್ಕ ಪಾಠ.
ಸರ್ವ ಆರೋಗ್ಯದ ಪಾಲನೆಯನ್ನರಿಯದೆ ಸ್ವಾರ್ಥದ ಪರಿಪಾಲನೆಯ
ಕಾಪಾಡಿಕೊಳ್ಳುವ ಹಠ.

ಜಾತ್ರೆ, ಮಾರ್ಕೆಟ್ ಗಳಲ್ಲಿ ತೊಡಗುವ ಜನಕೆ ಮುಖದ ಮೇಲೆ ಭಯದ ಮಾಸ್ಕು.
ಹೊರಗಡೆ ಬರದೇ ಮನೆಯಲ್ಲಿಯೇ ಉಳಿದುಕೊಳ್ಳುವ ಟಾಸ್ಕು.
ಉತ್ತೇಜನದ ಮನುಜನಿಗೆ ಸೂರ್ಯನ ಕಿರಣ ಸೋಂಕದೆ ಇರುವುದು ಕೋರೋಣ ಸೋಂಕಿನ ರಿಸ್ಕು.

ಜಗವೇ ನಿನದೆಂಬುದನ್ನು ಕಿತ್ತುಹಾಕುವುದು ಈ ಸೋಂಕಿನ ಜಾಲ.
ಪ್ರತಿ ಮನುಜ ಮನಗಳ ಉಸಿರಲ್ಲಿ ಹಾಕಿರುವುದು ಸೋಂಕಿನ ಬಿಲ.
ಜೀವಿ ಸರಪಳಿಯಿಂದ ಉಜ್ವಲಿಸುತ್ತಿದೆ ಬದುಕುವುದು ಜಟಿಲ.
ನಿನ್ನ ಜಗವೆಂಬುದನ್ನ ಮರೆತು ನರುನ ರುಳಾಡಿಸುವುದು. ಕಟ್ಟೆಚ್ಚರ ಇದು ತರವಲ್ಲ.

ಮನ್ನಿಸಲು ಸಾಧ್ಯವಾಗದ ರೀತಿಯಲ್ಲಿ ಶಿಕ್ಷಿಸುತ್ತಿರುವುದು ಈ ಕೋರೋಣ.
ಜಗಕೆ ಮುಳ್ಳಾಗಿ ಬಿಡುತಿರುವುದು ಬಾಣ.
ಭೂಮಿಯ ಬಿಟ್ಟು ಬದುಕಲಿಕ್ಕೆಲ್ಲಿರುವ ತಾಣ.
ಸ್ವಚ್ಛತೆಯ ಕಾಪಾಡಿ ಸರ್ವರನ್ನು ರಕ್ಷಿಸೋಣ.

ಉಸಿರಿನ ಮೇಲೆಯೇ ಪ್ರತಿ ಜೀವಿಗಳು ಬದುಕುವ ಜಗದಲ್ಲಿ.
ಪ್ರತಿ ಉಸಿರಿನ ಮೇಲೆಯೇ ಕ್ಷಣಗಳು ಉರುಳುವ ಮನದಲ್ಲಿ.
ಈ ಉಸಿರೇ ಸೋಂಕಾಗಿ ಹರಡಿದರೆ ಮನುಜ ವಿನಾಶದಲ್ಲಿ.
ತಡೆಯೋಣ ಕೊರೊನವನ್ನು ಪ್ರತಿ ಉಸಿರಿನ ಶುದ್ಧತೆಯ ಪ್ರತಿಜ್ಞೆಯಲ್ಲಿ.


© Altaf mulla