6 views
ಶೀರ್ಷಿಕೆ :- ಅನ್ಯಥಾ ಶರಣಂ ನಾಸ್ತಿ
ಜನನ ಮರಣಗಳ ಲೆಕ್ಕವೂ ನಿನ್ನದು.
ಕೋಪ ತಾಪಗಳ ಪರಿವೆಯು ಅಹುದು.
ಸಂಕಟ ಬಂದಾಗ ಧ್ಯಾನವು ನಿನ್ನದಾಗಿಹುದು.
ರೋಮ ರೋಮಗಳಲಿ ದೇವನ ಲೀಲೆಯಿದು,
ಮಾನವ ವ್ಯರ್ಥನಾಗಿ ವರ್ತಿಸುವ ಪ್ರಮಾದವಿಲ್ಲಿ,
ಅಗೋಚರ ಶಕ್ತಿಯನು ಅರಿಯದ ಅಂಧರಿಲ್ಲಿ,
ಕರುಣೆಯ ಸಾಗರನು ಪರಮಾತ್ಮ ತೆರೆಸುಕಣ್ಣಿಲ್ಲಿ,
ನೆಲೆಸಿರುವ ವಾಯುದೇವರು ನಿರಂತರ ಉಸಿರಲ್ಲಿ,
ಶಿಲೆಯಾಗಿ ನಿಂತಿರುವೆ ಪೂಜಿಸುವ ಗುಡಿಯಲಿ,
ಅಭಯವ ನೀಡುವೆ ಭಕ್ತರಿಗೆ ಮನಸಿನಲಿ,
ಅನ್ಯಥಾ ಶರಣಂನಾಸ್ತಿ ತುಂಬಿರುವೆ ಹೃದಯದಲಿ,
ಪಾಪ ಪುಣ್ಯಗಳ ಸಮತೋಲನ ಮಾಡುವೆ ಜಗದಲಿ,
ಇಳೆಯಿಂದ ಮಳೆಯನು ಸುರಿಯುವ ಸೃಷ್ಟಿಕರ್ತನು,
ನಿಸರ್ಗದ ಮಡಿಲಲ್ಲಿ ಸಕಲ ಜೀವರಾಶಿ ಸಲಹುವನು,
ಅಖಿಲಕೋಟಿ ಬ್ರಹ್ಮಾಂಡ ನಡೆಸುವ ಒಡೆಯನಿವನು,
ನೀಲಾಕಾಶ ಭೂಮಿಗಳ ಚಲನವಲನ ನಿಯಂತ್ರಿಸುವನು,
ಶ್ರೀಪಾದ ಆಲಗೂಡಕರ ✍️✍️
© SripadAlgudkar ಕಾವ್ಯಶ್ರೀ
ಕೋಪ ತಾಪಗಳ ಪರಿವೆಯು ಅಹುದು.
ಸಂಕಟ ಬಂದಾಗ ಧ್ಯಾನವು ನಿನ್ನದಾಗಿಹುದು.
ರೋಮ ರೋಮಗಳಲಿ ದೇವನ ಲೀಲೆಯಿದು,
ಮಾನವ ವ್ಯರ್ಥನಾಗಿ ವರ್ತಿಸುವ ಪ್ರಮಾದವಿಲ್ಲಿ,
ಅಗೋಚರ ಶಕ್ತಿಯನು ಅರಿಯದ ಅಂಧರಿಲ್ಲಿ,
ಕರುಣೆಯ ಸಾಗರನು ಪರಮಾತ್ಮ ತೆರೆಸುಕಣ್ಣಿಲ್ಲಿ,
ನೆಲೆಸಿರುವ ವಾಯುದೇವರು ನಿರಂತರ ಉಸಿರಲ್ಲಿ,
ಶಿಲೆಯಾಗಿ ನಿಂತಿರುವೆ ಪೂಜಿಸುವ ಗುಡಿಯಲಿ,
ಅಭಯವ ನೀಡುವೆ ಭಕ್ತರಿಗೆ ಮನಸಿನಲಿ,
ಅನ್ಯಥಾ ಶರಣಂನಾಸ್ತಿ ತುಂಬಿರುವೆ ಹೃದಯದಲಿ,
ಪಾಪ ಪುಣ್ಯಗಳ ಸಮತೋಲನ ಮಾಡುವೆ ಜಗದಲಿ,
ಇಳೆಯಿಂದ ಮಳೆಯನು ಸುರಿಯುವ ಸೃಷ್ಟಿಕರ್ತನು,
ನಿಸರ್ಗದ ಮಡಿಲಲ್ಲಿ ಸಕಲ ಜೀವರಾಶಿ ಸಲಹುವನು,
ಅಖಿಲಕೋಟಿ ಬ್ರಹ್ಮಾಂಡ ನಡೆಸುವ ಒಡೆಯನಿವನು,
ನೀಲಾಕಾಶ ಭೂಮಿಗಳ ಚಲನವಲನ ನಿಯಂತ್ರಿಸುವನು,
ಶ್ರೀಪಾದ ಆಲಗೂಡಕರ ✍️✍️
© SripadAlgudkar ಕಾವ್ಯಶ್ರೀ
Related Stories
12 Likes
2
Comments
12 Likes
2
Comments