...

2 views

ರೈತ
ಶೀರ್ಷಿಕೆ...."ರೈತ"

ಹಸಿರಿಗಾಗಿ ಹಗಲು ರಾತ್ರಿ
ಪರದಾಡುವ ರೈತ
ಅವನಲ್ಲಿ ಇಲ್ಲ ಒಂದಿಷ್ಟು ಸ್ವಾರ್ಥ

ಕಾಯಕವೇ ಆತನಿಗೆ ಕೈಲಾಸ
ದೇಶದ ಜನತೆಯನ್ನು ಸಲಹುತ್ತಿರುವ
ನಮ್ಮೆಲ್ಲರ ಅನ್ನದಾತ

ಸದಾ ಒಳ್ಳೆಯದನ್ನೇ ಬಯಸುವ
ಮುಗ್ಧ ಮನಸ್ಸಿನದಾತ
ದುಡಿಮೆಯೇ ದೇವರು ಎಂದಾತ

ಹಲವು ಕಷ್ಟಗಳು ಎದುರಾದರೂ
ಭೂಮಿಯನ್ನೆ ನಂಬಿದಾತ
ಅವನಲ್ಲವೆ ನಿಜವಾದ ಪರಮಾತ್ಮ

ಬೆವರು ಹನಿಗಳನ್ನೆ ಭೂಮಿಗೆ
ಅಭಿಷೇಕ ಮಾಡುವಾತ
ಹಸಿರಿನಿಂದ ಭೂ ತಾಯಿಗೆ ಸೀರೆ ಉಡಿಸಿದಾತ

ಗೌರವದಿ ಕಾಣಿರಿ ರೈತರನ್ನು
ಮರೆಯದಿರಿ ಅವರಿಲ್ಲದಿದ್ದರೆ
ನಾವೆಲ್ಲರೂ ಬದುಕಾಲಾರೆವು ಎಂದು

ಚಂದು ವಾಗೀಶ ದಾವಣಗೆರೆ