9 views
"ನೊಂದ ಮನದ ನೋವು"
ಬಿರುಕು ಬಿಟ್ಟ ಮಡಿಕೆಯಲ್ಲಿ
ನೀರು ನಿಲ್ಲುವುದೇ..?
ಬಂಜರು ಭೂಮಿಯಲ್ಲಿ ಹಸಿರು
ಹೊದ್ದ ವನದೇವಿ ಕಾಣುವಳೇ?
ಬಿಸಿಲ ಬೇಗೆಗೆ ಸಿಲುಕಿ ಒಣಗಿದ
ಮರದಲ್ಲಿ ಸಿಹಿಯಾದ ಹಣ್ಣು ಬಿಡುವುದೇ.?
ಕಷ್ಟಗಳ ಸರಮಾಲೆಯಲ್ಲಿ ನಲುಗಿ
ನಲುಗಿ..ನೋವನುಂಡ ಮನದಲ್ಲಿ
ಸಂತೋಷದ ನಗು ಅರಳುವುದೇ.?
ಕನ್ನಡಿಯೇ ಒಡೆದು ಹೋದಮೇಲೆ
ಪ್ರತಿಬಿಂಬ ಕಾಣುವುದೇ..?
ಕನಸುಗಳೆಲ್ಲ ನುಚ್ಚು ನೂರಾದ ಮೇಲೆ
ನಾಳಿನ ಭರವಸೆಗಳು ಜೀವಂತವಾಗಿರುವವೇ?
ಭಾವದ ಸೆಲೆಯೇ ಬತ್ತಿದ ಮೇಲೆ
ಭಾವನೆಗಳ ಕಾರಂಜಿ ಚಿಮ್ಮುವುದೇ?
ಆಯಸ್ಸೇ ಕಳೆದು ಹೋದಮೇಲೆ
ಸುಖದ ದಿನಗಳು ಬರುವವೇ..??
ನೀರು ನಿಲ್ಲುವುದೇ..?
ಬಂಜರು ಭೂಮಿಯಲ್ಲಿ ಹಸಿರು
ಹೊದ್ದ ವನದೇವಿ ಕಾಣುವಳೇ?
ಬಿಸಿಲ ಬೇಗೆಗೆ ಸಿಲುಕಿ ಒಣಗಿದ
ಮರದಲ್ಲಿ ಸಿಹಿಯಾದ ಹಣ್ಣು ಬಿಡುವುದೇ.?
ಕಷ್ಟಗಳ ಸರಮಾಲೆಯಲ್ಲಿ ನಲುಗಿ
ನಲುಗಿ..ನೋವನುಂಡ ಮನದಲ್ಲಿ
ಸಂತೋಷದ ನಗು ಅರಳುವುದೇ.?
ಕನ್ನಡಿಯೇ ಒಡೆದು ಹೋದಮೇಲೆ
ಪ್ರತಿಬಿಂಬ ಕಾಣುವುದೇ..?
ಕನಸುಗಳೆಲ್ಲ ನುಚ್ಚು ನೂರಾದ ಮೇಲೆ
ನಾಳಿನ ಭರವಸೆಗಳು ಜೀವಂತವಾಗಿರುವವೇ?
ಭಾವದ ಸೆಲೆಯೇ ಬತ್ತಿದ ಮೇಲೆ
ಭಾವನೆಗಳ ಕಾರಂಜಿ ಚಿಮ್ಮುವುದೇ?
ಆಯಸ್ಸೇ ಕಳೆದು ಹೋದಮೇಲೆ
ಸುಖದ ದಿನಗಳು ಬರುವವೇ..??
Related Stories
3 Likes
2
Comments
3 Likes
2
Comments