10 views
ಕಾವ್ಯ ದಿನಕೊಂದು ಕವಿತೆ
ಬರೆಯ ಹೊರಟೆ ನಾ
ಜತನದಿಂದ, ದಿನಕ್ಕೊಂದು ಕವಿತೆ;
ಬೆರಳೇರಿದಾಗ ಲೇಖನಿಯು, ನಾನರಿತೆ
ಎನಗುಂಟು ಸರಕಿನ ಚಿಂತೆ..!
ಕವಿತೆಯಲಿಹುದೊಂದು ಚರಿತೆ
ಸವಿತನಿಣುಕದ ತಾಣವ ನೀನರಿತೆ;
ಲೋಚನಾ ಪರಿಧಿಯೊಳರಿಯದೆ
ಆಲೋಚನಾ ಪರದೆಯೊಳರಿವಾದೆ..!
ಕವಿತೆ ಓ ಸವಿ ಸವಿ ಕವಿತೆ
ದೊರಕಿಸುವೆಯಾ ಸ್ಫೂರ್ತಿಯ ಒರತೆ?
ಗರಿಮೆಯದು ನಿನ್ನದೇ ಕವಿತೆ
ತೊಲಗಿಸು ಪ್ರೀತಿಯ ಕೊರತೆ..!
ಭಾವ ಲಹರಿಯಲ್ಲಿ ವಿಹರಿಸುವ
ಮನೋ ಸಂಚಾರಿಯಾಗಿಸಿಹೆ;
ಜೀವ ಝರಿಯ ಪಸರಿಸುವ
ಲೋಕ ಸಂಚಾರಿಯಾಗಿಸಿಹೆ..!!
ಮನಸಿನ ಗವಿಯೊಳಗರಳಿದ ಕವಿತೆ
ಕವಿಮನಸಿನೊಳಗೆಂದು ನೀನವಿತೆ.?
ಒಲಿದುಬಿಡು ಸರಾಗವಾಗಿ ಸರತಿಯಂತೆ,
ನಲಿಯುತಲಿ ಕಡಲನರಸುವ ಸರಿತೆಯಂತೆ...!!
© ಕೊಳಲು (ವೇಣುಗೋಪಾಲ್ ಎಂ ಎನ್)
ಜತನದಿಂದ, ದಿನಕ್ಕೊಂದು ಕವಿತೆ;
ಬೆರಳೇರಿದಾಗ ಲೇಖನಿಯು, ನಾನರಿತೆ
ಎನಗುಂಟು ಸರಕಿನ ಚಿಂತೆ..!
ಕವಿತೆಯಲಿಹುದೊಂದು ಚರಿತೆ
ಸವಿತನಿಣುಕದ ತಾಣವ ನೀನರಿತೆ;
ಲೋಚನಾ ಪರಿಧಿಯೊಳರಿಯದೆ
ಆಲೋಚನಾ ಪರದೆಯೊಳರಿವಾದೆ..!
ಕವಿತೆ ಓ ಸವಿ ಸವಿ ಕವಿತೆ
ದೊರಕಿಸುವೆಯಾ ಸ್ಫೂರ್ತಿಯ ಒರತೆ?
ಗರಿಮೆಯದು ನಿನ್ನದೇ ಕವಿತೆ
ತೊಲಗಿಸು ಪ್ರೀತಿಯ ಕೊರತೆ..!
ಭಾವ ಲಹರಿಯಲ್ಲಿ ವಿಹರಿಸುವ
ಮನೋ ಸಂಚಾರಿಯಾಗಿಸಿಹೆ;
ಜೀವ ಝರಿಯ ಪಸರಿಸುವ
ಲೋಕ ಸಂಚಾರಿಯಾಗಿಸಿಹೆ..!!
ಮನಸಿನ ಗವಿಯೊಳಗರಳಿದ ಕವಿತೆ
ಕವಿಮನಸಿನೊಳಗೆಂದು ನೀನವಿತೆ.?
ಒಲಿದುಬಿಡು ಸರಾಗವಾಗಿ ಸರತಿಯಂತೆ,
ನಲಿಯುತಲಿ ಕಡಲನರಸುವ ಸರಿತೆಯಂತೆ...!!
© ಕೊಳಲು (ವೇಣುಗೋಪಾಲ್ ಎಂ ಎನ್)
Related Stories
11 Likes
0
Comments
11 Likes
0
Comments